Get Updates
Get notified of breaking news, exclusive insights, and must-see stories!

ಅಭಿವೃದ್ಧಿಯ ಹಾದಿಯ ರಾಯಚೂರಿಗೆ ಸೋನಿಯಾ ಹಸಿರು ನಿಶಾನೆ

ರಾಯಚೂರು : ಕೇವಲ 28 ತಿಂಗಳುಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ 7ನೇ ಘಟಕದ ಕಾಮಗಾರಿಗಳ ಆರಂಭದ ಉದ್ಘಾಟನೆಯನ್ನು ಎಐಸಿಸಿ ಅಧ್ಯಕ್ಷೆ ಹಾಗೂ ಸಂಸತ್‌ ಸದಸ್ಯರಾದ ಸೋನಿಯಾ ಗಾಂಧಿ ಬುಧವಾರ ನೆರವೇರಿಸಿದರು.

ಕೇವಲ 28 ತಿಂಗಳ ಅಲ್ಪ ಕಾಲಮಿತಿಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ಸಂಕಲ್ಪ ಮಾಡಿರುವುದು ರಾಜ್ಯ ಸರಕಾರದ ಬದ್ಧತೆಯನ್ನು ತೋರುತ್ತದೆ ಎಂದು ಅವರು ಶ್ಲಾಘಿಸಿದರು. 210 ಮೆಗಾವ್ಯಾಟ್‌ ಸಾಮರ್ಥ್ಯದ ಈ 7ನೇ ಘಟಕ 640 ಕೋಟಿ ರುಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿ ರಾಜ್ಯದ ವಿದ್ಯುತ್‌ ಬೇಡಿಕೆಯನ್ನು ಪೂರೈಸಲಿದೆ, ಇದು ವಿದ್ಯುತ್‌ ಉತ್ಪಾದನೆ ಹಾಗೂ ಸ್ವಾವಲಂಬನೆಯ ಹಾದಿಯಲ್ಲಿ ಇಟ್ಟ ದಾಪುಗಾಲು ಎಂದು ಅವರು ಬಣ್ಣಿಸಿದರು.

ಈ ಸ್ಥಾವರದ ಇತರ 6 ಘಟಕಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನಾರ್ಹ ಎಂದ ಅವರು, ರಾಜ್ಯ ಸರಕಾರ ಆಲಮಟ್ಟಿ ವಿದ್ಯುತ್‌ಯೋಜನೆಯನ್ನು ಕರ್ನಾಟಕ ವಿದ್ಯುತ್‌ ನಿಗಮಕ್ಕೆ ವಹಿಸಿಕೊಡಲು ಕರ್ನಾಟಕ ಸರಕಾರ ನಿರ್ಧಾರ ತೆಗೆದುಕೊಂಡಿದೆ ಎಂದರು.

ತ್ಯಾಗ : ದೇಶದ ಪ್ರಗತಿಯ ದೃಷ್ಟಿಯಿಂದ ಕೈಗೊಳ್ಳುವ ಇಂತಹ ಮಹತ್ವದ ಯೋಜನೆಗಳಿಗಾಗಿ ತಮ್ಮ ಹೊಲ, ಮನೆ, ಮಠಗಳನ್ನು ಬಿಟ್ಟುಕೊಡುವ ಜನರ ತ್ಯಾಗ ಅತ್ಯಂತ ದೊಡ್ಡದು ಎಂದು ಹೇಳಿದ ಸೋನಿಯಾ ಗಾಂಧಿ ಅವರು, ಈ ಜನರಿಗೆ ಸೂಕ್ತ ಪುನರ್ವಸತಿ ಹಾಗೂ ಪರಿಹಾರ ದೊರಕಬೇಕು ಎಂದರು.

ಆಸ್ಪತ್ರೆಯ ಅರ್ಪಣೆ : ಹೈದರಾಬಾದ್‌ ಕರ್ನಾಟಕ ಪ್ರದೇಶದ ಜನತೆಯ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ 35 ಕೋಟಿ ರುಪಾಯಿ ವೆಚ್ಚದ ಅತ್ಯಾಧುನಿಕ ಹೈಟೆಕ್‌ ಅಸ್ಪತ್ರೆಯನ್ನು ರಾಜ್ಯಕ್ಕೆ ಅವರು ಸಮರ್ಪಿಸಿದರು. ಸರಣಿ ಕಾರ್ಯಕ್ರಮಗಳ ಈ ಸಂದರ್ಭದಲ್ಲಿ ಹಕ್ಕು ಪತ್ರಗಳನ್ನು ಸಹ ವಿತರಿಸಿದರು. ಅಂಬೇಡ್ಕರ್‌ ಭವನದ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಸ್ತ್ರೀಶಕ್ತಿ ಕಾರ್ಯಕ್ರಮದ ಉದ್ಘಾಟನೆಯೂ ನಡೆಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೌಜಲಗಿ, ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಗೃಹಸಚಿವ ಮಲ್ಲಿಕಾರ್ಜುನ ಖರ್ಗೆ, ಸಚಿವರುಗಳಾದ ಧರ್ಮಸಿಂಗ್‌, ಎಚ್‌.ಕೆ. ಪಾಟೀಲ್‌, ವೀರಕುಮಾರ್‌ ಪಾಟೀಲ್‌, ಕಾಂಗ್ರೆಸ್‌ ವರಿಷ್ಠ ಗುಲಾಂ ನಬೀ ಆಜಾದ್‌, ಶಾಸಕರುಗಳು ಹಾಗೂ ಸಂಸದರು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+