ಗದಗ ಜಿಲ್ಲೆ ಅಭಿವೃದ್ಧಿಗೆ 686 ಕೋಟಿ ರು. ವಿಶೇಷ ಯೋಜನೆ
ಗದಗ : ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 686 ಕೋಟಿ ರುಪಾಯಿಗಳ ವಿಶೇಷ ಯೋಜನೆಯನ್ನು ಮುಖ್ಯಂಮತ್ರಿ ಎಸ್. ಎಂ. ಕೃಷ್ಣ ಸೋಮವಾರ ಘೋಷಿಸಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರಗಳ ಸುಧಾರಣೆಗೆ 253 ಕೋಟಿ ರುಪಾಯಿ, ಜಿಲ್ಲೆಯ ಇತರ ಪ್ರದೇಶಗಳ ಅಭಿವೃದ್ಧಿಗೆ 233 ಕೋಟಿ ರುಪಾಯಿ ಹಾಗೂ 200 ಕೋಟಿ ರುಪಾಯಿಗಳ ವೆಚ್ಚದಲ್ಲಿ ರಾಜ್ಯ ರೇಷ್ಮೆ ಅಭಿವೃದ್ಧಿ ನಿಗಮದ ಮುಖಾಂತರ ಗದಗ- ವಿಜಾಪುರ ಮಧ್ಯದ ರೈಲ್ವೇ ಹಳಿಗಳ ಗೇಜ್ ಪರಿವರ್ತನೆಯ ಕಾರ್ಯವನ್ನು ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಇಲ್ಲಿ ನಡೆದ ಗದಗ-2000 ಶೃಂಗ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷ್ಣ ಅವರು ಯೋಜನೆ ಘೋಷಿಸಿದ್ದಾರೆ.
ಗದಗ-ಬೆಟಗೇರಿಗಳ ಅವೃದ್ಧಿಗೆ ತೆಗೆದಿರಿಸಿರುವ 253 ಕೋಟಿ ರುಪಾಯಿಗಳಲ್ಲಿ ಅವಳಿ ನಗರಗಳ ಒಳಚರಂಡಿ ಯೋಜನೆಗೆ 1114.60 ಲಕ್ಷ , 12ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರು ವಿತರಣಾ ವ್ಯವಸ್ಥೆಯ ಸುಧಾರಣೆ, ಹುಡ್ಕೋ ನೆರವಿನಿಂದ 2500 ಮನೆಗಳ ನಿರ್ಮಾಣಕ್ಕೆ 1550 ಲಕ್ಷ ಹಾಗೂ ಮುಂಡರಗಿ ಕೋರ್ಲಹಳ್ಳಿ ರಸ್ತೆಯನ್ನು ಸುಧಾರಣೆ ಮಾಡಿ ರಾಷ್ಟ್ರೀಯ ಹೆದ್ದಾರಿಗೆ ಜೋಡಿಸಲು 6ಕೋಟಿ ರುಪಾಯಿ ತೆಗೆದಿರಿಸಲಾಗಿದ್ದು, ಪಾಲಾ-ಬಾದಾಮಿ ರಸ್ತೆಗೆ 4 ಕೋಟಿ ರುಪಾಯಿ, ಜಿಲ್ಲಾ ಮಟ್ಟದ ಕಛೇರಿಗಳ ನಿರ್ಮಾಣಕ್ಕೆ 300 ಕೋಟಿ, ಬಸ್ ನಿಲ್ಧಾಣ ನಿರ್ಮಾಣಕ್ಕೆ 2 ಕೋಟಿ ತೆಗೆದಿರಿಸಲಾಗಿದೆ.
ಕೆ. ಎಚ್. ಪಾಟೀಲ್ ಕ್ರೀಡಾಂ-ಗ-ಣ ಅಭಿ-ವೃ-ದ್ಧಿ : ಹಮಾಲರ ಕಾಲೋನಿ ನಿರ್ಮಾಣಕ್ಕೆ 40 ಲಕ್ಷ, ಭೀಷ್ಮನ ಕೆರೆ ಅಭಿವೃದ್ಧಿಗೆ 40 ಕೋಟಿ ರುಪಾಯಿ ವೆಚ್ಚ , ಗದುಗಿನಲ್ಲಿ ನೇಕಾರರ ಕಾಲೋನಿ, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಸುಲಭ ಶೌಚಾಲಯ, ಕೆ. ಎಚ್. ಪಾಟೀಲ್ ಕ್ರೀಡಾಂ-ಗ-ಣದ ಕ್ರಿಕೆಟ್ ಪೆವಿಲಿಯನ್ ನಿರ್ಮಾಣ, ಬಿಂಕದಕಟ್ಟೆಯ ಪ್ರಾಣಿಸಂಗ್ರಹಾಲಯದ ಸುಧಾರಣೆ, ಗದಗದಲ್ಲಿ ನೂತನ ಬಸ್ ಡಿಪೋ ಮುಂತಾದ ಅನೇಕ ಅಭಿವೃದ್ಧಿ ಕಾರ್ಯಗಳು ಯೋಜನೆಯಲ್ಲಿ ಸೇರಿವೆ. ಮೊದಲೇ ರೂಪಿಸಿದ ಯೋಜನೆಗಳಲ್ಲದೆ, ತುಂಗಭದ್ರಾ ನದಿಯಿಂದ ಗದಗ-ಬೆಟಗೇರಿಗೆ ಕುಡಿಯುವ ನೀರಿನ ಯೋಜನೆಗೆ 8 ಕೋಟಿ ರುಪಾಯಿ ಮಂಜೂರು, ಸ್ನಾತಕೋತ್ತರ ಕಟ್ಟಡ ನಿರ್ಮಾಣಕ್ಕೆ 50 ಎಕರೆ ಜಮೀನು ಸೇರಿದಂತೆ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಸ್ಥಳದಲ್ಲಿಯೇ ಮಂಜಾರಾತಿ ನೀಡಿದ್ದಾರೆ. ವೈದ್ಯಕೀಯ ಮಹಾವಿದ್ಯಾಲಯದ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.
ಜಿಲ್ಲೆ-ಯ- ಸಮ-ಗ್ರ ಅಭಿ-ವೃ-ದ್ಧಿ-ಗೆ ವಿಶೇ-ಷ ಯೋಜ-ನೆ ಘೋಷಿ-ಸಿ-ದ ಮುಖ್ಯ-ಮಂ-ತ್ರಿ-ಗ-ಳ-ನ್ನು ಜಿಲ್ಲೆ-ಯ ಅನೇ-ಕ ಮುಖಂ-ಡ-ರು ಅಭಿ-ನಂ-ದಿ-ಸಿ-ದ್ದಾ-ರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications