ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಗು ಉಳಿಸಲು ಹೋಗಿ ಕುಟುಂಬವೇ ನೀರುಪಾಲು
ಬೆಳಗಾವಿ :ತುಂಬಿ ಹರಿಯುತ್ತಿರುವ ಗೋಕಾಕ ಜಲಪಾತ ನೋಡಲು ಬಂದಿದ್ದ ದಂಪತಿಗಳು, ಕಾಲುಜಾರಿ ಬೀಳುತ್ತಿದ್ದ ಮಗುವನ್ನು ಉಳಿಸುವ ಪ್ರಯತ್ನದಲ್ಲಿ ಮಗುವಿನ ಸಹಿತ ತಾವೂ ನೀರು ಪಾಲಾದ ದಾರುಣ ಘಟನೆ ಭಾನುವಾರ ಸಂಜೆ ಸಂಭವಿಸಿದೆ.
ಗೋಕಾಕ ಜಲಪಾತ ವೀಕ್ಷಿಸುತ್ತಿದ್ದ 8 ವರ್ಷದ ನಗ್ಮಾ, ಕಾಲು ಜಾರಿ ಬೀಳುತ್ತಿದ್ದಾಗ ಹಿಡಿದುಕೊಳ್ಳಲು ಹೋದ ಗೋಕಾಕದ ಅಂಬೇಡ್ಕರ್ ನಗರ ನಿವಾಸಿ, ಮಹಮ್ಮದ್ ಅಜೀಜ್ ಮತ್ತು ಅವರ ಪತ್ನಿ ಶಹಜಹಾನ್ ಮಗಳ ಸಹಿತ ನೀರಿಗೆ ಬಿದ್ದು ಜಲಸಮಾಧಿಯಾದರು ಎಂದು ಇಲ್ಲಿಗೆ ಬಂದಿರುವ ಪ್ರಾಥಮಿಕ ವರದಿಗಳು ತಿಳಿಸಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments
Story first published: Thursday, October 19, 2000, 5:30 [IST]