ಬಟೋಹಿ ಭಾರತ ಭೇಟಿ ವೇಸ್ಟು ? ಕಿಂಗ್ ವರದಿ ಸಲ್ಲಿಕೆ ವಿಳಂಬ
ಕೇಪ್ಟೌನ್ : ಒಲಂಪಿಕ್ಸ್ ಗುಂಗಿನಲ್ಲಿ ಮೈಮರೆತಿದ್ದ ಎಷ್ಟೋ ಜನಕ್ಕೆ ದಕ್ಷಿಣ ಆಫ್ರಿಕದಲ್ಲಿ ಮ್ಯಾಚ್ಫಿಕ್ಸಿಂಗ್ ತನಿಖೆ ನಡೆಸುತ್ತಿರುವ ಕಿಂಗ್ ಆಯೋಗದ ವಕೀಲೆ ಶಮೀಲ ಬಟೋಹಿ ಭಾರತಕ್ಕೆ ಬಂದು ಹೋಗಿದ್ದು ಗೊತ್ತಾಗಲೇ ಇಲ್ಲ. ದೆಹಲಿ ಪೊಲೀಸರಿಂದ ಕ್ರೋನಿಯೆ- ಬುಕ್ಕಿ ಸಂಭಾಷಣೆಯಿರುವ ಶ್ರವ್ಯ ಕೆಸೆಟ್ಟಿನ ಪ್ರತಿ ಪಡೆಯುವುದು ಬಟೋಹಿ ಭಾರತ ಭೇಟಿಯ ಉದ್ದಿಶ್ಯವಾಗಿತ್ತು. ಅದನ್ನು ಅವರು ಪಡೆದುದಾಗಿಯೂ ವರದಿಗಳು ಪ್ರಕಟವಾದವು. ಆದರೆ ತಾವು ಯಾವ ಕೆಸೆಟ್ಟನ್ನೂ ಭಾರತದಿಂದ ತಂದಿಲ್ಲ ಎಂದು ಬಟೋಹಿ ಈಗ ಹೇಳಿದ್ದು, ತನಿಖೆ ಮಂದಗತಿಯಲ್ಲಿ ಸಾಗಿದೆ.
ಕಿಂಗ್ ಆಯೋಗ ನವೆಂಬರ್ ಹೊತ್ತಿಗೆ ವರದಿ ಸಲ್ಲಿಸುವುದಾಗಿ ಹೇಳಿದ್ದು, ಇವತ್ತೋ ನಾಳೆಯೋ ಅದು ವರದಿ ಸಲ್ಲಿಸಲಿದೆ ಅನ್ನುವುದು ಸುಳ್ಳಾಗಿದೆ. ಈ ಹಿಂದೆ ಬಟೋಹಿ, ಭಾರತದ ಭೇಟಿಯಿಂದ ತಮಗೆ ಸಾಕಷ್ಟು ಮಾಹಿತಿ ದೊರೆತಿದ್ದು , ಕ್ರೋನಿಯೆ ಕೆಸೆಟ್ ಕೂಡ ಸಿಕ್ಕಿದೆ ಎಂದು ಹೇಳಿದುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಕಿಂಗ್ ಆಯೋಗದ ವಕ್ತಾರ ಜಾನ್ ಬ್ಯಾಕಾನ್ ಈಗ ಹೀಗೆ ಹೇಳುತ್ತಾರೆ- ‘ಬಟೋಹಿ ಯಾವುದೇ ಮಾಧ್ಯಮಕ್ಕೆ ಹಾಗೆ ಹೇಳಲಿಲ್ಲ ಎಂದು ಆಯೋಗಕ್ಕೆ ತಿಳಿಸಿದ್ದಾರೆ. ಅವರು ಕ್ರೋನಿಯೆ ಕೆಸೆಟ್ಟಿನ ಪ್ರತಿಯನ್ನೂ ತಂದಿಲ್ಲ. ಆಯೋಗ ತನಿಖೆಯ ಕಾರ್ಯತಂತ್ರವನ್ನು ಬದಲಿಸಿ, ಹೊಸ ಆಯಾಮಗಳತ್ತ ಗಮನ ಹರಿಸಲಿದೆ. ನವೆಂಬರ್ ಹೊತ್ತಿಗೆ ವರದಿ ಸಿದ್ಧಪಡಿಸಲಿದೆ’.
ಒಂದೆಡೆ ಕಪಿಲ್ ದೇವ್ ಅಪರಾಧಿಯೋ ಅಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಭಾರತದ ಸಿಬಿಐ ತಿಪ್ಪರಲಾಗ ಹಾಕುತ್ತಿದೆ. ಇದಕ್ಕೆ ಹೊರತೆಂಬಂತಿದ್ದ ಕಿಂಗ್ ಆಯೋಗದ ತನಿಖೆಯೂ ಈಗ ಆಮೆ ವೇಗದಲ್ಲಿ ನಡೆಯುತ್ತಿರುವುದು ವಿಪರ್ಯಾಸ ಎನ್ನುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು.
(ಐಎಎನ್ಎಸ್)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications