ಚೆನ್ನೈ ಮೇಲೆ ಒತ್ತಡ ಹೇರಲು ಕೇಂದ್ರಕ್ಕೆ ರಾಜ್ಯ ಸಂಸದರ ಮನವಿ
ನವದೆಹಲಿ : ರಾಜ್ ಬಿಡುಗಡೆ ಸಂಬಂಧ ತಮಿಳುನಾಡು ಸರಕಾರದ ಮೇಲೆ ಒತ್ತಡ ಹೇರಬೇಕೆಂದು ರಾಜ್ಯ ಸಂಸತ್ ಸದಸ್ಯರ ನಿಯೋಗ ವಾಜಪೇಯಿ ಅವರಿಗೆ ಗುರುವಾರ ಮನವಿ ಮಾಡಿದೆ. ರಾಜ್ಕುಮಾರ್ ಅವರ ಅಪಹರಣವಾಗಿ 68 ದಿನಗಳು ಕಳೆದರೂ ಅವರ ಬಿಡುಗಡೆಯ ಸೂಚನೆಗಳೇ ಕಾಣುತ್ತಿಲ್ಲ ಹೀಗಾಗಿ ಹೆಚ್ಚಿನ ಕಾಳಜಿ ವಹಿಸಿ ರಾಜ್ ಬಿಡುಗಡೆಗೆ ಪ್ರಯತ್ನಿಸುವಂತೆ ತಮಿಳುನಾಡು ಸರಕಾರದ ಮೇಲೆ ಒತ್ತಡ ಹೇರಲೇ ಬೇಕು ಎಂದು ಪ್ರಧಾನಿಯವರನ್ನು ಕೋರಲಾಗಿದೆ.
ಮಾರ್ಗರೆಟ್ ಆಳ್ವ, ಐ.ಜಿ. ಸನದಿ, ಜಿ.ಎಸ್. ಬಸವರಾಜ್, ಡಿ.ಕೆ. ತಾರಾದೇವಿ, ಬಿಂಬಾರಾಯ್ಕರ್ ಅವರನ್ನು ಒಳಗೊಂಡಿದ್ದ ಕರ್ನಾಟಕದ ಸಂಸತ್ ಸದಸ್ಯರ ನಿಯೋಗದ ಕೋರಿಕೆಯನ್ನು ಕೇಳಿದ ಪ್ರಧಾನಿಯವರು ಕೇಂದ್ರದ ಗೃಹ ಕಾರ್ಯದರ್ಶಿಯವರೊಂದಿಗೂ ಸಮಾಲೋಚನೆ ನಡೆಸಿದ್ದಾರೆ. ರಾಜ್ಕುಮಾರ್ ಅವರ ಬಿಡುಗಡೆ ಪ್ರಕ್ರಿಯೆಯಲ್ಲಿ ರಾಜ್ಯ ಸರಕಾರದ ಪ್ರಯತ್ನಕ್ಕೆ ಪೂರಕವಾದ ಎಲ್ಲ ರೀತಿಯ ನೆರವು ನೀಡಲು ಕೇಂದ್ರ ಸಿದ್ಧವಿದೆ ಎಂಬ ಭರವಸೆಯನ್ನು ನಿಯೋಗದ ಪ್ರತಿನಿಧಿಗಳಿಗೆ ಪ್ರಧಾನಿ ನೀಡಿದ್ದಾರೆ.
ಏಕಾಂಗಿಯಾಗೇ ಕಾಡಿಗೆ ಹೋಗುವೆ ವೇಣುಗೋಪಾಲ್ : ಈ ಮಧ್ಯೆ ವರನಟ ರಾಜ್ಕುಮಾರ್ ಹಾಗೂ ಇತರ ಇಬ್ಬರು ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರಲು ತಾವು ಏಕಾಂಗಿಯಾಗೇ ಕಾಡಿಗೆ ಹೋಗಲು ಸಿದ್ಧವಿರುವುದಾಗಿ ವೀರಪ್ಪನ್ ಸಹಚರರಾದ ಟಾಡಾ ಬಂದಿಗಳ ಪರ ವಕಾಲತ್ತು ವಹಿಸಿರುವ ಮೈಸೂರಿನ ವಕೀಲ ವೇಣುಗೋಪಾಲ್ ತಿಳಿಸಿದ್ದಾರೆ.
ನಾನು ನಕ್ಕೀರನ್ ಗೋಪಾಲ್ ಜತೆ ಕಾಡಿಗೆ ಹೋಗಲು ಸಿದ್ಧನಿಲ್ಲ ಎಂಬುದಾಗಿ ರಾಜ್ಯದ ಮಂತ್ರಿ ಚಂದ್ರೇಗೌಡರು ಹೇಳಿರುವುದ ಸೂಕ್ತವಲ್ಲ ಎಂದ ಅವರು, ಸರಕಾರ ಅನುಮತಿ ನೀಡಿದರೆ, ನಾನೊಬ್ಬನೇ ಕಾಡಿಗೆ ಹೋಗುತ್ತೇನೆ ಎಂದು ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.
ಗೋಪಾಲ್ಗಿನ್ನೂ ವೀರಪ್ಪನ್ ಸಂದೇಶ ಸಿಕ್ಕಿಲ್ಲ : ಐದನೇ ಬಾರಿಗೆ ಸಂಧಾನಯಾತ್ರೆಗೆ ಕಾಡಿಗೆ ಹೋಗಲು ತುದಿಗಾಲಿನಲ್ಲಿ ನಿಂತಿರುವ ಗೋಪಾಲ್ ಅವರಿಗೆ ಇನ್ನೂ ವೀರಪ್ಪನ್ನಿಂದ ಯಾವುದೇ ಸಂದೇಶ ದೊರಕದಿರುವ ಕಾರಣ ಅವರು, ಇನ್ನೂ ಚೆನ್ನೈನಲ್ಲೇ ಕಾಯುತ್ತಿದ್ದಾರೆ ಎಂದು ನಮ್ಮ ಚೆನ್ನೈ ವರದಿಗಾರರು ತಿಳಿಸಿದ್ದಾರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications