ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ಅಭಿ-ವೃ-ದ್ಧಿ : ಸಾಲ ಪಡೆ-ಯ-ಲು ರಸ್ತೆ ಅಭಿ-ವೃ-ದ್ಧಿ ನಿಗ-ಮ-ಕ್ಕೆ ಸರ್ಕಾ-ರ-ದ ಖಾತ್ರಿ

By Staff
|
Google Oneindia Kannada News

ಬೆಂಗಳೂರು :141 ಕಿ.ಮೀ. ಉದ್ದದ ಬೆಂಗಳೂರು- ಮೈಸೂರು ರಸ್ತೆ ಸೇರಿದಂತೆ ರಾಜ್ಯದ 6 ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 200 ಕೋಟಿ ರುಪಾಯಿ ಸಾಲ ಪಡೆಯಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಖಾತ್ರಿ ಕೊಡಲು ರಾಜ್ಯ ಸರ್ಕಾರ ಬುಧವಾರ ನಿರ್ಧರಿಸಿದೆ. ಜೊತೆಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಆರ್ಥಿಕ ಬೆಂಬಲ ನೀಡಲು ಸರ್ಕಾರ ತೀರ್ಮಾನಿಸಿದೆ.

ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದು ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಸುದ್ದಿಗಾರರಿಗೆ ತಿಳಿಸಿದರು. ಸಾಲದ ಮೊತ್ತದಲ್ಲಿ ನಿಗಮವು ಬೆಂಗಳೂರು- ಬಂಟ್ವಾಳ, ಬೇಲೂರು- ಬಿಳಿಕೆರೆ, ಜೇವ-ರ್ಗಿ- -ಬಿಜಾಪುರ, ಬಳ್ಳಾರಿ ಹಾಗೂ ಗುಲ್ಬರ್ಗಾ ವರ್ತುಲ ರಸ್ತೆಗಳ ಅಭಿವೃದ್ಧಿ ಮತ್ತು ಸೇತುವೆಗಳ ಕಾಮಗಾರಿ ಕೈಗೆತ್ತಿಕೊಳ್ಳಲಿದೆ ಎಂದರು.

ರಾಜ್ಯದ 21 ನಗರಗಳ ಕೊಳಚೆ ಪ್ರದೇಶದ ಜನರಿಗೆ ವಸತಿ ನಿರ್ಮಿಸಲು ಕೊಳಚೆ ನಿರ್ಮೂಲನೆ ಮಂಡಳಿಯು ಹುಡ್ಕೋದಿಂದ 25 ಕೋಟಿ ರುಪಾಯಿ ಸಾಲ ಪಡೆಯುವುದಕ್ಕೂ ಸರ್ಕಾರ ಖಾತ್ರಿ ನೀಡಲಿದೆ ಎಂದು ಬಿ.ಕೆ.ಸಿ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X