ಮಳೆ ಅಂದುಕೊಂಡಷ್ಟು ಚೆಂದವಲ್ಲ
ಬೆಂಗಳೂರು : ಅಂದ ಚಂದ ಅಂತ ಮಳೆಯ ಕಾರು ಬಾರನ್ನು ವರ್ಣಿಸಿ ಬರೆದಷ್ಟು ಈ ಮಳೆ ಚೆನ್ನಾಗಿಲ್ಲ. ಅದೂ ಬೆಂಗಳೂರಿನ ಗಲ್ಲಿಯಲ್ಲಿ ಯಾವುದೋ ಕಾಲದ ಕಟ್ಟಡದ ಛಾವಣಿಯಡಿಯಲ್ಲಿ ತಲೆ ತೂರಿಸಿಕೊಂಡು ಹರಕು ಕಂಬಳಿ ಹೊದ್ದು ನಡುಕುತ್ತಲೇ ಮುದುರಿ ನಿದ್ದೆ ಹೋದವನು, ಕನವರಿಸುತ್ತಾ ಹಾಕುವ ಶಾಪದಲ್ಲಿ ಮಳೆಯ ವಿಕಾರತೆಯ ವಿವರಣೆಯಿರುತ್ತದೆ.
ಶನಿವಾರ ಧೋಗುಟ್ಟಿದ ಮಳೆಯಲ್ಲಿ ಬೆಂಗಳೂರಿನ ಇಬ್ಬರು ಕರಗಿದ್ದಾರೆ. ಕುಸಿದ ಕಟ್ಟಡದಡಿಯಿಂದ ಅವರು ಎದ್ದು ಬರುವುದಕ್ಕಾಗಲೇ ಇಲ್ಲ. ಶನಿವಾರ ರಾತ್ರಿಯ ಮಳೆ ಅದೇನು ವಿಪರೀತಕ್ಕೆ ಹೋಗಿತ್ತೆಂದರೆ ಜನ, ಚರಂಡಿ ಮತ್ತು ರಸ್ತೆಯನ್ನು ಬೇರ್ಪಡಿಸಲಿಕ್ಕಾಗದೇ, ಇಲ್ಲದ ಬೀದಿ ದೀಪಗಳಿಗೆ ಹಿಡಿ ಶಾಪ ಹಾಕುತ್ತಾ , ನಿಲ್ಲಿಸದ ಆಟೋಗಳಿಗೆ ರೇಗುತ್ತಾ, ವಾಹನಗಳನ್ನು ಪಚಕ್ಕನೇ ರಟ್ಟಿಸುವ ಕಪ್ಪು ನೀರಿನಲ್ಲಿ ಒದ್ದೆಯಾಗಿ ನಡುಗುತ್ತ ಅದು ಹೇಗೋ ಮನೆ ಸೇರಿಕೊಂಡರು. ಬೆಳಗಾದರೂ ಒದ್ದೆ ರಸ್ತೆಗಳು ರಾತ್ರಿ ನಡೆದ ಮಳೆಯ ಕಾರುಬಾರನ್ನು ಹೇಳುತ್ತಿದ್ದವು.
ಮೈಸೂರು ದಸರಾ ಯಾಂತ್ರಿಕವಾಗಿ ನಡೆಯುತ್ತಿದೆ. ಹಾಗೆಂದು ಮನೆ ಮನೆಯಲ್ಲಿ ಮಂದಿಯೇನೂ ನವರಾತ್ರಿ ಆಚರಣೆಯಲ್ಲಿ ಹಿಂದುಳಿದಿಲ್ಲ. ತರಕಾರಿ, ಹಣ್ಣು, ಹೂವುಗಳ ಬೆಲೆ ನೆಲದಿಂದ ಮೇಲೇರುತ್ತಲೇ ಇದೆ. ಈ ಬಾರಿ ಬಸ್ಸಿನ ರೇಟುಗಳೂ ಇವುಗಳ ಜೊತೆಗಿವೆ. ಕರೆಂಟು ರೇಟು ಜಾಸ್ತಿಯಾದರೂ ಚಿಕುಬುಕು ಬೆಳಗುವ ಲೈಟುಗಳೇನೂ ಕಡಿಮೆಯಾಗಿಲ್ಲ. ಎಲ್ಲ ಕೊಚ್ಚೆ- ಖುಷಿಗಳೊಂದಿಗೆ ಮಂದಿ ಏನೂ ಆಗದವರಂತೆ ನಡೆಯುತ್ತಿದ್ದಾರೆ.
ಭಾನುವಾರದಂದು ಮಳೆ ಕರಾವಳಿಯ ಬಸ್ಸೇರಿಲ್ಲ. ಉತ್ತರ ಒಳನಾಡಿನಲ್ಲಿಯೇ ವ್ಯಸ್ತವಾಗಿತ್ತು . ಚನ್ನ ಪ-ಟ್ಟ-ಣದಲ್ಲಿ 11 ಸೆಂಟಿ ಮೀಟರ್, ಬೆಂಗಳೂರು, ಹೊಸಕೋಟೆಯಲ್ಲಿ 7 ಸೆಂಟಿ ಮೀಟರ್, ಮಂಡ್ಯ, ರಾಣಿಬೆನ್ನೂರಿನಲ್ಲಿ -ಕ್ರ-ಮ-ವಾ-ಗಿ 5ರಿಂದ 6 ಸೆಂಟಿಮೀಟರ್ ಮಳೆ ಸುರಿದಿದೆ. ಮೈಸೂರಿನ ದಸರಾ ಟೆಂಟುಗಳ ಮೇಲೆ ಮೂರು ಸೆಂಟಿ ಮೀಟರ್ ಮಳೆಯ ಕೆಲಸವಾಗಿದೆ.
ಮಂಗಳವಾರದೊಳಗೆ ಬೆಂಗಳೂರು, ಚಿತ್ರದುರ್ಗ, ಮಂಡ್ಯದಲ್ಲಿ , ಗುಡುಗು, ಮಿಂಚಿನ ಹಿಮ್ಮೇಳದಲ್ಲಿ ಮಳೆ ಸುರಿಯಬಹುದು. ಕರಾವಳಿಗೂ ಮಳೆಯ ಪ್ರಸಾದ ಭಾಗ್ಯವಿದೆ. ಬೆಂಗಳೂರಿಗೆ ಹಗಲಿನಲ್ಲಿ ಸೂರ್ಯನನ್ನಾಗಲೀ, ರಾತ್ರಿ ಚಂದ್ರನನ್ನಾಗಲೀ ನೋಡುವ ಭಾಗ್ಯವಿಲ್ಲ. ಮಂಗಳವಾರದೊಳಗೆ ಗುಡುಗು ಮಳೆ ಬರಲಿದೆ ಹುಶಾರ್ ಎಂದು ಹವಾಮಾನ ಇಲಾಖೆ ಹೇಳಿದೆ.-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications