ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಳ್ಳಂಬೆಳ್ಳ ಬಳಿ ಇನ್ನೊಂದು ಅಪಘಾತ, 7 ಸಾವು
ಬೆಂಗಳೂರು : ಭಾನುವಾರ ಮುಂಜಾನೆ ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಸಮೀಪ ಸಂಭವಿಸಿದ ಪೇಪರ್ ವ್ಯಾನ್- ಲಾರಿ ಮುಖಾಮುಖಿ ಡಿಕ್ಕಿಯಲ್ಲಿ ವ್ಯಾನಿನಲ್ಲಿದ್ದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವ್ಯಾನಿನಲ್ಲಿದ್ದ ಇತರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಚಿತ್ರದುರ್ಗಕ್ಕೆ ಹಿಂದೂ ಪತ್ರಿಕೆಗಳನ್ನು ವ್ಯಾನ್ ಕೊಂಡೊಯ್ಯುತ್ತಿತ್ತು. ಎದುರಿನಿಂದ ಲಾರಿ ಬೆಂಗಳೂರಿನ ಕಡೆಗೆ ಬರುತ್ತಿತ್ತು. ವಿಪರೀತ ಮಳೆ ಸುರಿಯುತ್ತಿದ್ದ ಕಾರಣ ಎದುರಿನಿಂದ ಬಂದ ಲಾರಿ ವ್ಯಾನಿನ ಚಾಲಕನಿಗೆ ಗೋಚರಿಸದೆ ಈ ಅಪಘಾತ ಸಂಭವಿಸಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.
(ಯುಎನ್ಐ)
Story first published: Wednesday, October 18, 2000, 5:30 [IST]