ಅ-ಕ್ರ-ಮ ಅಕ್ಕಿ- ಅಡಿ-ಕೆ ವಹಿ-ವಾ-ಟು ಪ್ರ-ಕ-ರ-ಣ-ಗ-ಳ ಪತ್ತೆ
ಪುತ್ತೂರು : ಪುತ್ತೂರು ಮತ್ತು ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತಾಧಿಕಾರಿ-ಯಾ-ಗಿ-ರು-ವ ಪುತ್ತೂರು ಸಹಾಯಕ ಕಮಿಷನರ್ ಹರ್ಷಗುಪ್ತಾ ವಿವಿಧೆಡೆ ನಡೆಸಿದ ಕಾರ್ಯಾಚರಣೆಗಳಲ್ಲಿ , ಪರವಾನಗಿ ಇಲ್ಲದೆ ಅಕ್ಕಿ ಮಾರಾಟ ಮಾಡುತ್ತಿದ್ದ ಮತ್ತು ಲೆಕ್ಕ ಪತ್ರವಿಲ್ಲದೆ ಅಡಿಕೆ ವಹಿವಾಟು ನಡೆಸುತ್ತಿದ್ದ ವಿವಿಧ ಪ್ರಕರಣಗಳನ್ನು ಪತ್ತೆ ಹಚ್ಚಿ 2.57 ಲಕ್ಷ ರೂಪಾಯಿ ದಂಡ ಮತ್ತು ಮಾರುಕಟ್ಟೆ ಶುಲ್ಕ ವಸೂಲು ಮಾಡಿದ್ದಾರೆ.
ಸುಳ್ಯದಲ್ಲಿ ಹರ್ಷ ಗುಪ್ತಾ ನಡೆಸಿದ ಕಾರ್ಯಾಚರಣೆ-ಯ-ನ್ನು ಅಡಿಕೆ ವ್ಯಾಪಾರಿಗಳು ಪ್ರತಿ-ಭ-ಟಿ-ಸಿ-ದ-ರು. ಸೆ.22ರಿಂದ ಅಡಿಕೆ ಮಂಡಿಗಳು ಬಂದ್ ಆಗಿದ್ದು ಇಂದು ಹರ್ಷದ್ ಗುಪ್ತಾ ಮತ್ತು ವ್ಯಾಪಾರಿಗಳ ಸಭೆ ಸುಳ್ಯ ಎಪಿಎಂಸಿ ಯಾರ್ಡ್ನಲ್ಲಿ ನಡೆಯಿತು. ತಾನು ಕಾನೂನು ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದೇನೆ. ಅಕ್ರಮ ವಹಿವಾಟುದಾರರ ವಿರುದ್ಧ ಮಾತ್ರವೇ ಕ್ರಮ ಕೈಗೊಂಡಿದ್ದೇನೆ ಎಂದು ಸಹಾಯಕ ಕಮಿಷನರ್ ಹೇಳಿದ್ದಾರೆ.
ವ್ಯಾಪಾರಿಗಳ ಕ್ರಮದ ಟೀಕೆ : ಸುಳ್ಯದಲ್ಲಿ ಅಡಿಕೆ ವ್ಯಾಪಾರಿಗಳು ಆರು ದಿನಗಳಿಂದ ನಡೆಸುತ್ತಿರುವ ಅಡಿಕೆ ವ್ಯಾಪಾರ ಬಂದ್ಗೆ ರೈತರು ತೀವ್ರ ಟೀಕೆ ವ್ಯಕ್ತ ಪಡಿಸಿದ್ದಾರೆ. ಈ ಬಂದ್ನಿಂದಾಗಿ ಪುತ್ತೂರು ಬಿಟ್ಟರೆ ಜಿಲ್ಲೆಯ ಅತಿ ದೊಡ್ಡ ಅಡಿಕೆ ವ್ಯವಹಾರ ಕೇಂದ್ರವಾಗಿರುವ ಸುಳ್ಯದಲ್ಲಿ ಅಡಿಕೆ ವಹಿವಾಟು ಅಸ್ತವ್ಯಸ್ತಗೊಂಡಿದೆ. ವ್ಯಾಪಾರಿಗಳ ಮುಷ್ಕರ ನ್ಯಾಯೋಚಿತ ಅಲ್ಲ. ಅಡಿಕೆ ಧಾರಣೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ವ್ಯಾಪಾರ ಸ್ಥಗಿತಗೊಳಿಸಿದ್ದಾರೆ. ಇದಕ್ಕೆ ಅವರು ಸಹಾಯಕ ಕಮಿಷನರ್ ಕಾರ್ಯಾಚಾರಣೆಯನ್ನು ದಂಧೆಯನ್ನಾಗಿ ಬಳಸಿಕೊಂಡಿದ್ದಾರೆ ಎಂದು ರೈತ ಮುಖಂಡರಾದ ಬಾಲಚಂದ್ರ ಗೌಡ, ಸೂರ್ಯನಾರಾಯಣಯ್ಯ ಪ್ರತಿಕ್ರಿಯಿಸಿದ್ದಾರೆ.
(ಮಂಗಳೂರು ಪ್ರತಿನಿಧಿಯಿಂದ)