ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೆಎಂಎಂ ಲಂಚ ಪ್ರಕರಣದಲ್ಲಿ ನರಸಿಂಹರಾವ್, ಬೂಟಾಸಿಂಗ್ ಭಾಗಿಗಳು
ಹೊಸದಿಲ್ಲಿ :ಜೆಎಂಎಂ ಬಹುಕೋಟಿ ಲಂಚ ಪ್ರಕರಣದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಮಾಜಿ ಕೇಂದ್ರ ಸಚಿವ ಬೂಟಾಸಿಂಗ್ ಅವರು ಅಪರಾಧಿಗಳೆಂದು ಸಿಬಿಐನ ವಿಶೇಷ ಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ.
ಭ್ರಷ್ಟಾಚಾರ ಮತ್ತು ಪಿತೂರಿಗೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದ ರಾವ್ ಮತ್ತು ಬೂಟಾಸಿಂಗ್ ಅವರು ಅಪರಾಧಗಳೆಂದು ಕೋರ್ಟ್ ಸಾರಿದೆ. ರಾಜಕೀಯವಾಗಿ ಕೋಲಾಹಲ ಎಬ್ಬಿಸಿದ್ದ , ಜಾರ್ಖಂಡ್ ಮುಕ್ತಿ ಮೋರ್ಚಾ ಸಂಸದರಿಗೆ ಹಣ ನೀಡಿದರೆಂಬ ಈ ಪ್ರಕರಣದ ತೀರ್ಪನ್ನು ಕಿಕ್ಕಿರಿದ ಕೋರ್ಟ್ ಹಾಲ್ನಲ್ಲಿ ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅಜಿತ್ ಬಾರಿಹೋಕ್ ಓದಿದರು.
ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ಲಾಲ್ ಮತ್ತು ಮಾಜಿ ಕೇಂದ್ರ ಸಚಿವ ಅಜಿತ್ಸಿಂಗ್ ಸೇರಿದಂತೆ 9 ಆರೋಪಿಗಳನ್ನು ಆರೋಪಮುಕ್ತಗೊಳಿಸಿದ್ದಾರೆ. ಶಿಕ್ಷೆಗೆ ಸಂಬಂಧಿಸಿದಂತೆ ವಿಚಾರಣೆ ಅಕ್ಟೋಬರ್ 11ಕ್ಕೆ ನಡೆಯಲಿದೆ.
Comments
Story first published: Friday, September 29, 2000, 5:30 [IST]