For Daily Alerts
ಕರ್ನಾಟಕ ವಿ.ವಿಯಲ್ಲಿ ಗವಾಯಿಗಳ ಅಧ್ಯಯನ ಪೀಠ
ಗದಗ : ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪಂಡಿತ ಪಂಚಾಕ್ಷರಿ ಗವಾಯಿಗಳ ಅಧ್ಯಯನ ಪೀಠ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರ ಸೂಚಿಸಿದೆ.
ಉತ್ತರ ಕರ್ನಾಟಕ ಕಲಾವಿದರ ಸಂಘಟನೆಯಾದ ಗದುಗಿನ ಕಲಾ ವಿಕಾಸ ಪರಿಷತ್ ಈ ಸಂಬಂಧ ಸರಕಾರಕ್ಕೆ ಮಾಡಿಕೊಂಡಿದ್ದ ಮನವಿಯನ್ನು ಪುರಸ್ಕರಿಸಿರುವ ಸರಕಾರ ತತ್ಸಂಬಂಧ ಕಾರ್ಯಪ್ರವೃತ್ತವಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆಯ ವತಿಯಿಂದ ವಿವಿಯ ಕುಲಪತಿಗಳಿಗೆ ಬರೆಯಲಾಗಿರುವ ಪತ್ರದಲ್ಲಿ ಅಭಿವೃದ್ಧಿ ಮತ್ತು ಅನುದಾನದ ಮಿತಿಯಲ್ಲಿ ವೆಚ್ಚವನ್ನು ಭರಿಸುವುದಕ್ಕೆ ಸೀಮಿತಗೊಳಿಸಿ ಪಂಚಾಕ್ಷರಿ ಗವಾಯಿಗಳ ಪೀಠ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಈ ವಿಷಯವನ್ನು ಕಲಾ ವಿಕಾಸ ಪರಿಷತ್ ಕಾರ್ಯಾಧ್ಯಕ್ಷ ಸಿ.ಕೆ. ಕಡಣಿ ಅವರು ತಿಳಿಸಿದ್ದಾರೆ.
Story first published: Tuesday, September 26, 2000, 5:30 [IST]