ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬ್ರಹ್ಮೋತ್ಸವದ ಅಂಗವಾಗಿ ತಿರುಪತಿಯಲ್ಲಿ ಶ್ರೀವಾರಿ ಸೇವೆ
ತಿರುಪತಿ : ಸ್ವ ಇಚ್ಚೆಯಿಂದ ಸೇವೆ ಸಲ್ಲಿಸಲು ಬಯಸುವವರಿಗಾಗಿ ಅನುಕೂಲ ಕಲ್ಪಿಸಲು ಬರುವ ಬ್ರಹ್ಮೋತ್ಸವದಿಂದ ಶ್ರೀವಾರಿ ಸೇವೆಯನ್ನು ಆರಂಭಿಸಲು ತಿರುಮತ ತಿರುಪತಿ ಆಡಳಿತ ಮಂಡಳಿ ತೀರ್ಮಾನಿಸಿದೆ.
ಅನ್ನದಾನ ಪಾಕಶಾಲೆ, ವೈಕುಂಠ ಸಂಕೀರ್ಣ, ಮಾಹಿತಿ ಕೇಂದ್ರ, ಕಲ್ಯಾಣಕಟ್ಟೆ ಮತ್ತು ದೇವಾಲಯ ಗರ್ಭಗುಡಿ ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ಈ ಸೇವೆ ಸಲ್ಲಿಸಬಹುದಾಗಿದೆ.
ಬ್ರಹ್ಮೋತ್ಸವದ ಅಂಗವಾಗಿ ಪ್ರತಿದಿನ ಉಚಿತ ಆಹಾರ ಪೊಟ್ಟಣ ವಿತರಣೆ ಹಾಗೂ ಲಾಡು ವಿತರಣಾ ಕೇಂದ್ರಗಳನ್ನು ದಿನದ 24 ಗಂಟೆಗಳೂ ತೆರೆದಿರುವುದಾಗಿ ಕಾರ್ಯಕಾರಿ ಅಧಿಕಾರಿ ಪಿ. ಕೃಷ್ಣಯ್ಯ ಬುಧವಾರ ತಿಳಿಸಿದ್ದಾರೆ.
Comments
Story first published: Wednesday, September 20, 2000, 5:30 [IST]