ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲಾಗಾರದ ಪೈಪ್‌ಲೈನ್‌ ಯೋಜನೆಗೆ ವಿರೋಧ

By Staff
|
Google Oneindia Kannada News

ಮಂಗಳೂರು :ಪೈಪ್‌ಲೈನ್‌ ಮೂಲಕ ತೈಲ ಸಾಗಿಸುವ ಯೋಜನೆಗೆ ಭಾರಿ ವಿರೋಧ ಕೇಳಿಬಂದಿದೆ. ಈ ಸಂಬಂಧ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ತೈಲಾಗಾರದ ಉತ್ಪನ್ನಗಳನ್ನು ರೈಲು ಮಾರ್ಗದ ಮೂಲಕವೇ ಸಾಗಿಸಬೇಕು ಎಂದು ಎಚ್‌ಪಿಸಿಎಲ್‌ ಪೈಪ್‌ಲೈನ್‌ ಸಂತ್ರಸ್ತರು ಪಟ್ಟು ಹಿಡಿದರು.

ಎಂಆರ್‌ಪಿಎಲ್‌ ತೈಲೋತ್ಪನ್ನ ಸಾಗಿಸಲು ಎಚ್‌ಪಿಸಿಎಲ್‌ ಪ್ರಸ್ತಾಪಿಸಿರುವ ಮಂಗಳೂರು - ಬೆಂಗಳೂರು ನಡುವಣ 364 ಕಿ.ಮೀಟರ್‌ ಉದ್ದದ ಪೈಪ್‌ಲೈನ್‌ ಕಾಮಗಾರಿಗೆ ಸೋಮವಾರ ನಡೆದ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಸಂತ್ರಸ್ತರಿಗೆ ಮಾಹಿತಿ ನೀಡಲೆಂದು ಕರೆದಿದ್ದ ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾಸಿ ಸಚಿವ ರಮಾನಾಥ ರೈ ವಹಿಸಿದ್ದರು.
ಈ ಯೋಜನೆಯ ಪೂರ್ವಭಾವಿ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ ಭೂಸ್ವಾಧೀನ ಕಾರ್ಯ ಮುಗಿದಿದ್ದು, ಕಾಮಗಾರಿ ಆರಂಭದ ಹಂತದಲ್ಲಿದೆ. ಪೈಪ್‌ಲೈನ್‌ ಕೃಷಿ ಭೂಮಿ, ಮನೆ ಇರುವ ಪ್ರದೇಶಗಳ ಮೂಲಕ ಹಾದು ಹೋಗಲಿದ್ದು, ಜನರಿಗೆ ತೊಂದರೆಯಾಗುತ್ತದೆ ಎಂದು ಸಂತ್ರಸ್ತರು ಹಾಗೂ ಪರಿಸರ ವಾದಿಗಳು ವಾದಿಸಿದರು.

ಈ ಕಾರ್ಯ ಆರಂಭಿಸುವ ಮುನ್ನ ಭೂಸ್ವಾಧೀನಾಧಿಕಾರಿಗಳು ಸ್ಥಳೀಯನ್ನು ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ. ಅವರಿಗೆ ಕನಿಷ್ಠ ಮಾಹಿತಿಯನ್ನೂ ನೀಡಿಲ್ಲ ಎಂದು ಆಕ್ಷೇಪಿಸಿದರು. ಈ ಯೋಜನೆಗೆ ರೈಲು ಮಾರ್ಗವೇ ಸುರಕ್ಷಿತ ಎಂದೂ ಪಟ್ಟುಹಿಡಿದರು.

ಸಚಿವರ ಸೂಚನೆ : ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಪಾರದರ್ಶಕವಾಗಿಯೂ ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಹಿತಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಪೈಪ್‌ಲೈನ್‌ ಯೋಜನೆ ಅನುಷ್ಠಾನಕ್ಕೆ ತರುತ್ತಿರುವ ಪೆಟ್ರೋನೆಟ್‌ನ ಎಸ್‌.ಬಿ. ಪಾಂಡೆ, ಭೂಸ್ವಾಧೀನ ಅಧಿಕಾರಿ ಆನಂದ ಮಲ್ಯ, ಜಿಲ್ಲಾಧಿಕಾರಿ ಕಪಿಲ್‌ ಮೋಹನ್‌ ಇದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X