ತೈಲಾಗಾರದ ಪೈಪ್ಲೈನ್ ಯೋಜನೆಗೆ ವಿರೋಧ
ಮಂಗಳೂರು :ಪೈಪ್ಲೈನ್ ಮೂಲಕ ತೈಲ ಸಾಗಿಸುವ ಯೋಜನೆಗೆ ಭಾರಿ ವಿರೋಧ ಕೇಳಿಬಂದಿದೆ. ಈ ಸಂಬಂಧ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ತೈಲಾಗಾರದ ಉತ್ಪನ್ನಗಳನ್ನು ರೈಲು ಮಾರ್ಗದ ಮೂಲಕವೇ ಸಾಗಿಸಬೇಕು ಎಂದು ಎಚ್ಪಿಸಿಎಲ್ ಪೈಪ್ಲೈನ್ ಸಂತ್ರಸ್ತರು ಪಟ್ಟು ಹಿಡಿದರು.
ಎಂಆರ್ಪಿಎಲ್
ತೈಲೋತ್ಪನ್ನ
ಸಾಗಿಸಲು
ಎಚ್ಪಿಸಿಎಲ್
ಪ್ರಸ್ತಾಪಿಸಿರುವ
ಮಂಗಳೂರು
-
ಬೆಂಗಳೂರು
ನಡುವಣ
364
ಕಿ.ಮೀಟರ್
ಉದ್ದದ
ಪೈಪ್ಲೈನ್
ಕಾಮಗಾರಿಗೆ
ಸೋಮವಾರ
ನಡೆದ
ಸಭೆಯಲ್ಲಿ
ತೀವ್ರ
ವಿರೋಧ
ವ್ಯಕ್ತವಾಯಿತು.
ಸಂತ್ರಸ್ತರಿಗೆ
ಮಾಹಿತಿ
ನೀಡಲೆಂದು
ಕರೆದಿದ್ದ
ಈ
ಸಭೆಯ
ಅಧ್ಯಕ್ಷತೆಯನ್ನು
ಜಿಲ್ಲಾ
ಉಸ್ತುವಾಸಿ
ಸಚಿವ
ರಮಾನಾಥ
ರೈ
ವಹಿಸಿದ್ದರು.
ಈ
ಯೋಜನೆಯ
ಪೂರ್ವಭಾವಿ
ಕಾಮಗಾರಿ
ಈಗಾಗಲೇ
ಪ್ರಗತಿಯಲ್ಲಿದೆ
ಭೂಸ್ವಾಧೀನ
ಕಾರ್ಯ
ಮುಗಿದಿದ್ದು,
ಕಾಮಗಾರಿ
ಆರಂಭದ
ಹಂತದಲ್ಲಿದೆ.
ಪೈಪ್ಲೈನ್
ಕೃಷಿ
ಭೂಮಿ,
ಮನೆ
ಇರುವ
ಪ್ರದೇಶಗಳ
ಮೂಲಕ
ಹಾದು
ಹೋಗಲಿದ್ದು,
ಜನರಿಗೆ
ತೊಂದರೆಯಾಗುತ್ತದೆ
ಎಂದು
ಸಂತ್ರಸ್ತರು
ಹಾಗೂ
ಪರಿಸರ
ವಾದಿಗಳು
ವಾದಿಸಿದರು.
ಈ ಕಾರ್ಯ ಆರಂಭಿಸುವ ಮುನ್ನ ಭೂಸ್ವಾಧೀನಾಧಿಕಾರಿಗಳು ಸ್ಥಳೀಯನ್ನು ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ. ಅವರಿಗೆ ಕನಿಷ್ಠ ಮಾಹಿತಿಯನ್ನೂ ನೀಡಿಲ್ಲ ಎಂದು ಆಕ್ಷೇಪಿಸಿದರು. ಈ ಯೋಜನೆಗೆ ರೈಲು ಮಾರ್ಗವೇ ಸುರಕ್ಷಿತ ಎಂದೂ ಪಟ್ಟುಹಿಡಿದರು.
ಸಚಿವರ ಸೂಚನೆ : ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಪಾರದರ್ಶಕವಾಗಿಯೂ ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಹಿತಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಪೈಪ್ಲೈನ್ ಯೋಜನೆ ಅನುಷ್ಠಾನಕ್ಕೆ ತರುತ್ತಿರುವ ಪೆಟ್ರೋನೆಟ್ನ ಎಸ್.ಬಿ. ಪಾಂಡೆ, ಭೂಸ್ವಾಧೀನ ಅಧಿಕಾರಿ ಆನಂದ ಮಲ್ಯ, ಜಿಲ್ಲಾಧಿಕಾರಿ ಕಪಿಲ್ ಮೋಹನ್ ಇದ್ದರು.