ಕಾದಿ-ರು-ವು-ದು ಸರ್ಕಾ-ರ ವಿಶ್ವ-ಬ್ಯಾಂ-ಕ್ ನೆರವು ನೀಡು-ವು-ದೆಂ-ದು..
ಮೈಸೂರು: ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಅಭಿವೃದ್ಧಿಗೆ ಸರ್ಕಾ-ರ ವಿ-ಶ್ವ-ಬ್ಯಾಂ-ಕ್-ನಿಂ-ದ ಎರಡು ಸಾವಿರ ಕೋಟಿ ರೂಪಾಯಿ ನೆರ-ವು ಎದುರು ನೋಡುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಖಾಸಗಿ ವಲಯಗ-ಳಿಂ-ದ ಶಾಲೆ-ಗ-ಳ ದತ್ತು -ಸ್ವೀ-ಕಾ-ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಒಳ್ಳೆ ಗುಣಮಟ್ಟದ ಶಿಕ್ಷಣ ನೀಡಲು ಸರಕಾರಕ್ಕೆ ಈ ನೆರವಿನ ಅಗತ್ಯವಿದೆ. ಸರಕಾರವೊಂದಕ್ಕೇ, ಎಲ್ಲ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವತ್ತ ಗಮನ ಹರಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಶಾಲೆಗಳನ್ನು ದತ್ತು ನೀಡುವುದು ಒಳ್ಳೆಯ ಕ್ರಮ ಎಂದರು.
ಸರಕಾರದ ಅಧೀನದಲ್ಲಿಯೇ ಇರುವ ದತ್ತು ಶಾಲೆಗಳಿಗೆ ಹೆಚ್ಚು ಅಧಿಕಾರ ನೀಡುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡುವ ಕುರಿತು ಸರಕಾರ ಯೋಚಿಸುತ್ತಿದೆ. ಪ್ರಸ್ತುತ 3,600 ಕೋಟಿ ರೂಪಾಯಿಗಳನ್ನು ಸರಕಾರ ಶಿಕ್ಷಣಕ್ಕೆ ವ್ಯಯಿಸುತ್ತಿದ್ದು, ಇದರಲ್ಲಿ ಶೇಕಡಾ 95 ರಷ್ಟು ಹಣ ವೇತನಕ್ಕೆ ಖರ್ಚಾಗುತ್ತದೆ ಎಂದು ಸಚಿವರು ಹೇಳಿದರು.
(ಯುಎನ್ಐ)