ಏನು ಮನಸು ಮಳೆಯದು ?
ಬೆಂಗಳೂರು : ಊರಿನಲ್ಲಿರುವಾಗ ಆಗಸ ನೋಡಿ ಮಳೆಯ ಮನಸ ಓದುತ್ತಿದ್ದ ಅಜ್ಜಿ , ಬೆಂಗಳೂರಿಗೆ ಬಂದು, ಮಗನ ಪ್ಲಾ ್ಯಟ್ನ ಬಾಲ್ಕನಿಯಲ್ಲಿ ಕಾಣುವ ಪುಟ್ಟ ಆಕಾಶವನ್ನು ದಿಟ್ಟಿಸುತ್ತಾಳೆ. ಆದರೆ ಮಳೆಯ ಮನಸ್ಸನ್ನು ಓದಲಾರಳು. ಇದು ಮಳೆ ತರುವ ಮೋಡವೋ, ಹೆಪ್ಪು ಗಟ್ಟಿದ ಹೊಗೆಯೋ ಎಂತು ಹೇಳುವುದು ? ರಾತ್ರಿ ಗಂಟೆ 12 ಕಳೆದರೂ ಬೆಂಗಳೂರಿನ ಆಕಾಶದಲ್ಲಿ ಚುಕ್ಕಿ ಮೂಡುವುದಿಲ್ಲ. ಕಳೆದ ಮೂರು ದಿನದಿಂದ ಬೆಂಗಳೂರು ಸಂಜೆಗಳೆಲ್ಲಾ ಮಳೆಯ ತೆಕ್ಕೆಯಲ್ಲಿ . ಏನು ಮನಸಾಯಿತೋ ಮಳೆಗೆ ತಿಳಿಯದು. ಬೆಂಗಳೂರಿಗೆ ಬಂದಿದೆ.
ಮುಂಜಾನೆ ಕಣ್ಣುಜ್ಜಿಕೊಂಡು ಕಿಟಕಿಯಲ್ಲಿ ಇಣುಕಿದರೆ ರಾತ್ರಿ ಚಿರಿಗುಟ್ಟಿದ ಮಳೆಯ ಪಿಟಿ ಪಿಟಿ ಹನಿಗಳು, ಮತ್ತೆ ಮುಸುಕೆಳೆದುಕೊಳ್ಳುವಂತೆ ಮಾಡುತ್ತವೆ. ಆದರೆ ಈ ಬೆಚ್ಚನೆ ಊರು, ಮಳೆ ಮತ್ತೆ ಈ ಅಜ್ಜಿಯ ನೆನಪುಗಳ್ಯಾವುದೂ ಕರ್ತವ್ಯಕ್ಕೆ ಬದಲಿಯಾಗವು. ಬೆಂಗಳೂರಿನಲ್ಲಿ ಶನಿವಾರ ಸಂಜೆ ಚಿಣ್ಣರು ರಸ್ತೆ ದಾಟಲಾಗದೆ, ಪೂಟ್ ಪಾತಿನಲ್ಲಿ ಮೊಣಕಾಲು ಮುಳುಗುವ ಕೆಂಪು ನೀರನ್ನೇ ನೋಡುತ್ತಾ ನಿಂತಿದ್ದರು. ಆಫೀಸಿನಲ್ಲಿ ಫೋನೆತ್ತಿಕೊಂಡವರೆಲ್ಲಾ ಅಲ್ಲಿ ಮಳೆ ಬಂತಾ ? ಎಂದು ಪ್ರಶ್ನಿಸುತ್ತಲೇ ಮಾತು ಆರಂಭಿಸುತ್ತಿದ್ದರು. ಇಲ್ಲಿ ಮಳೆ ಬಂದಿದೆ ನೋಡು ಎಂದೇ ಆ ಕಡೆಯವರು ಮಾತಿಗಿಳಿಯುತ್ತಿದ್ದರು.
ಭಾನುವಾರ ರಜೆ ತೆಗೆದುಕೊಳ್ಳದ ಮಳೆ ಹೊಸ ಕೋಟೆಯಲ್ಲಿ 8 ಸೆಂ. ಮೀ., ಬೆಂಗಳೂರು ವಿಮಾನ ನಿಲ್ದಾಣದಲ್ಲಿ 7 ಸೆಂಟಿ ಮೀಟರ್ ಸುರಿದಿದೆ. ಇಲ್ಲೆಲ್ಲಾ ಹರಿದಾಡುವ ಮಳೆಗೆ ಕರಾವಳಿಗೆ ಹೋಗಲು ಪುರುಸೊತ್ತಿಲ್ಲ. ಮತ್ತೆ ಕರ್ತವ್ಯ.... ಕರಾವಳಿಯಲ್ಲಿಯೇ ಉಳಿದು ಬಿಡುವುದೆಂದರೆ ಬೆಂಗಳೂರಿನವರು ಏನೆಂದು ಕೊಳ್ಳಲಿಕ್ಕಿಲ್ಲ ? ಕರಾವಳಿಯವರೆಲ್ಲಾ ದಸರೆಗೆ ಮುಂಚೆಯಂತೂ ಈ ಮಳೆ ಬಂದೇ ಬರುತ್ತದೆ ಎಂದು ಪ್ರೀತಿ, ಆಸೆಯಿಂದ ಪ್ರತಿ ಬೆಳಗೂ ತಮ್ಮದೇ ಅಂದಾಜಿನಲ್ಲಿ ದಿನ ಆರಂಭಿಸುತ್ತಾರೆ. ಆದರೆ ಹವಾಮಾನ ಇಲಾಖೆಯವರು ಇನ್ನೆರಡು ದಿನ ಈ ಮಳೆ ಕರಾವಳಿಯತ್ತ ಹೋಗುವ ಮನಸ್ಸು ತೋರಿಲ್ಲ ಎನ್ನುತ್ತಾರೆ. ಅವರು ಮಳೆಯ ಮನಸ್ಸು ಓದಿ ಬಿಟ್ಟಿದ್ದಾರಾ ?
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications