ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ ಅಪಹರಣ : ದಸರೆ ಆಹ್ವಾನ ಪತ್ರಿಕೆ ಮುದ್ರಣ ವಿಳಂಬ
ಮೈಸೂರು : ಈ ತಿಂಗಳ 28ರಿಂದ ಆರಂಭವಾಗಲಿರುವ ವಿಶ್ವವಿಖ್ಯಾತ ದಸರೆಯ ಆಹ್ವಾನ ಪತ್ರಿಕೆ ಮುದ್ರಣ ವಿಳಂಬವಾಗಿದೆ.
ದಸರೆಯನ್ನು ವರನಟ ಡಾ. ರಾಜ್ಕುಮಾರ್ ಅವರಿಂದ ಉದ್ಘಾಟಿಸಲು ರಾಜ್ಯ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ವಿಳಂಬ ತಲೆದೋರಿದೆ. ರಾಜ್ ಅವರು ವೀರಪ್ಪನ್ ವಶದಲ್ಲಿ ಇರುವುದರಿಂದ ದಸರೆ ಆರಂಭವಾಗುವುದರೊಳಗೆ ಅವರ ಬಿಡುಗಡೆ ಆಗುವುದು ಅಸ್ಪಷ್ಟ. ಹೀಗಾಗಿ ಸ್ವಾಗತ ಸಮಿತಿಯು ಆಹ್ವಾನ ಪತ್ರಿಕೆ ಮುದ್ರಿಸಲು ವಿಳಂಬ ಮಾಡುತ್ತಿದೆ. ರಾಜ್ ಬಿಡುಗಡೆ ಆಗದಿದ್ದಲ್ಲಿ ಉದ್ಘಾಟನೆ ಯಾರು ಮಾಡುತ್ತರೆ ಎಂಬ ಪ್ರಶ್ನೆಗಳೂ ಇದರ ಬೆನ್ನಲ್ಲೇ ಕೇಳಿಬರುತ್ತಿವೆ.
Comments
Story first published: Sunday, September 17, 2000, 5:30 [IST]