ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಗೂರು ನವಿಲೆ ಸಂತ್ರಸ್ಥರಿಗೆ 50 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ
ಹಾಸನ : ಸುರಂಗ ನಿರ್ಮಾಣ ಕಾಮಗಾರಿಯಲ್ಲಿ ಜಮೀನು ಕಳೆದುಕೊಂಡ ಬಾಗೂರು ನವಿಲೆ ಯೋಜನೆ ಸಂತ್ರಸ್ಥರಿಗೆ ಪರಿಹಾರ ನೀಡಲು, ರಾಜ್ಯ ಸರಕಾರ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಶ್ರೀಕಂಠಯ್ಯ ಶನಿವಾರ ಹೇಳಿದ್ದಾರೆ.
ಹಿಂದೆ 25 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಈಗ ಅದನ್ನು 50ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ ಸಚಿವರು, ಇಲ್ಲಿನ ಕಲ್ಲೇನ ಹಳ್ಳಿ, ಸೋಮನಹಳ್ಳಿ ಮತ್ತು ಓಬಳಾಪುರದಲ್ಲಿ ಏತ ನೀರಾವರಿ ಕೆಲಸ ಆರಂಭವಾಗಿದೆ. ಬಾಗೂರು ಕೆರೆ ತುಂಬಿದೆ ಎಂದರು.
ರಾಜ್ಯದ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವ ಬಗೆಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಅದರಲ್ಲಿ ಹಾಸನ ವಿಮಾನ ನಿಲ್ದಾಣದ ಕುರಿತೂ ಚರ್ಚೆಯಾಗಿದೆ ಎಂದ ಸಚಿವರು, ಜಿಲ್ಲೆಯ ಹಿರಿಸಾವೆ ಹೋಬಳಿಗೆ ನೀರಾವರಿ ಒದಗಿಸುವ ನಿಟ್ಟಿನಲ್ಲಿ ಸರ್ವೆ ಕಾರ್ಯ ಮುಗಿದಿದೆ. ಜನಿವಾರ ಕೆರೆಯಿಂದ ಮಾರ್ಕೋನ ಹಳ್ಳಿಯ ನಡುವಿನ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು ಎಂದರು.
Comments
Story first published: Sunday, September 17, 2000, 5:30 [IST]