ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರೆಗೆ ಮೊದಲೇ ಮೈಸೂರು ಸೇರಿದ ಗಂಟು ಕಳ್ಳರು

By Staff
|
Google Oneindia Kannada News

ಮೈಸೂರು :ಸಂತೆಗೆ ಮೊದಲೇ ಗಂಟು ಕಳ್ಳರು ಬಂದು ಸೇರಿದರು ಎನ್ನುವುದು ಜನಜನಿತವಾದ ಗಾದೆ ಮಾತು. ಈಗ ಮೈಸೂರಿನಲ್ಲಿ ಆಗಿರುವುದೂ ಅದೇ. ದಸರೆ ಆರಂಭಕ್ಕೆ ಕೆಲವೇ ದಿನಗಳು ಉಳಿದಿರುವಾಗ ಭವಿಷ್ಯ ಹೇಳುವ ನೆಪದಲ್ಲಿ ಪ್ರವಾಸಿಗರನ್ನು ಹಾಗೂ ಮೈಸೂರು ನಾಗರಿಕರನ್ನು ವಂಚಿಸುವ ವಂಚಕರ ತಂಡಗಳು ಅರಮನೆ ನಗರಿಗೆ ಆಗಮಿಸಿವೆ.

ಇಂತಹ ಒಂದು ಮಂತ್ರವಾದಿಗಳ ತಂಡ ತೊಣಚಿಕೊಪ್ಪಲು ಬಡಾವಣೆಯ ನಾಲ್ಕನೇ ಹಂತದಲ್ಲಿರುವ ಎ.ಆರ್‌. ಜೆಟ್ಟಪ್ಪ ಎನ್ನುವವರ ಮನೆಗೆ ಹೋಗಿ ಅವರ ಪತ್ನಿ ಗಜಲಕ್ಷ್ಮೀ ಅವರಿಗೆ ಭವಿಷ್ಯ ಹೇಳುವ ನೆಪದಲ್ಲಿ ಮಂಕುಭೂದಿ ಎರಚಿ ಅವರಿಂದ 5 ಸಾವಿರ ರುಪಾಯಿಗೆ ಚೆಕ್‌ ಬರೆಸಿಕೊಂಡು ಪರಾರಿಯಾಗುತ್ತಿದ್ದ ಸರಸ್ವತಿ ಪುರಂ ಪೊಲೀಸರು ಬಂಧಿಸಿದ್ದಾರೆ.

ಬಂದಿತರನ್ನು ರಾಣೆಬೆನ್ನೂರಿನ ಅಬ್ಬಣ್ಣ, ಸುರೇಶ್‌, ಗುಡ್ಡಪ್ಪ ಮತ್ತು ಕರುಬಸಪ್ಪ ಎಂದು ಗುರುತಿಸಲಾಗಿದ್ದು, ಇಂತಹ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X