ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಂಜಿನಿಯರ್ ಅಪಹರಣ : 12 ಮಂದಿ ಬಂಧನ
ಬೆಳಗಾವಿ: ಕರ್ನಾಟಕ ವಿದ್ಯುತ್ ಪ್ರಸಾರ ನಿಗಮದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಅವರನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸೆಪ್ಟೆಂಬರ್ 13ರಂದು ಬೆಳಗಾವಿ ಜಿಲ್ಲೆಯ ರಾಯಭಾಗದ ರೈಲು ನಿಲ್ದಾಣದಿಂದ ಎಂಜಿನಿಯರ್ ಅನ್ನು ಅಪಹರಿಸಿ, ಪಂಪ್ಸೆಟ್ಗೆ ಬಳಸಲಾದ ವಿದ್ಯುತ್ ಶುಲ್ಕದ ಬಾಕಿ ಹಣವನ್ನು ಪಾವತಿಸುವಂತೆ ರೈತರಿಗೆ ಒತ್ತಾಯಪಡಿಸಿದರೆ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ್ದರು.
ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ತಹಶೀಲ್ದಾರ್, ಎಂಜಿನಿಯರ್ ಅವರನ್ನು ಅಪಹರಿಸಿದ ದಿನದಂದೇ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
Comments
Story first published: Saturday, September 16, 2000, 5:30 [IST]