ದುಬೈ ಐಟಿ ಸ್ಫರ್ಧೆಗೆ 38 ಭಾರತೀಯ ಕಂಪನಿಗಳ ರಂಗು !
ದುಬೈ : ಇಲ್ಲಿನ ಇಂಟರ್ನೆಟ್ ಸಿಟಿಯಲ್ಲಿ ಏರ್ಪಡಿಸಲಾಗಿರುವ ಜಾಗತಿಕ ಮಟ್ಟದ ಇ-ವಾಣಿಜ್ಯ ಸ್ಪರ್ಧೆಗೆ ಭಾರತದ 38 ಕಂಪನಿಗಳು ಆಯ್ಕೆಯಾಗಿವೆ. ಪ್ರಪಂಚಾದ್ಯಂತ 23 ದೇಶಗಳ 154 ಮಾಹಿತಿ ತಂತ್ರಜ್ಞಾನ ಕಂಪನಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ತಮ್ಮ ಹೊಸ ವಾಣಿಜ್ಯ ಯೋಜನೆಗಳನ್ನು ಸಾದರಪಡಿಸಲಿವೆ.
ಮೂರು ಅತ್ಯುತ್ತಮ ಯೋಜನಾ ವರದಿಗಳಿಗೆ ತಲಾ ಒಂದು ಲಕ್ಷ 50 ಸಾವಿರ ಡಾಲರ್ ಬಹುಮಾನವಿದೆ. ಬಹುಮಾನ ವಿಜೇತ ಕಂಪನಿಗಳ ಹೆಸರನ್ನು ಅಕ್ಟೋಬರ್ ಕೊನೆಗೆ ಘೋಷಿಸಲಾಗುವುದು. 1385 ಕಂಪನಿಗಳು ತಮ್ಮ ಯೋಜನೆಗಳನ್ನು ಕಳಿಸಿದ್ದು, ಸ್ಪರ್ಧೆಗೆ ಗುಣಮಟ್ಟವನ್ನು ಮಾತ್ರ ಮಾನದಂಡವನ್ನಾಗಿ ಇಟ್ಟುಕೊಳ್ಳಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ.
ಸ್ಪರ್ಧೆಗೆ ಅಂತಿಮವಾಗಿ ಆಯ್ಕೆಯಾಗುವ ಕಂಪನಿಗಳನ್ನು, ತಮ್ಮ ವಿವರವಾದ ವಾಣಿಜ್ಯಯೋಜನೆಗಳನ್ನು ಸಾದರಪಡಿಸಲು ಸೆಪ್ಟಂಬರ್ 21ರಂದು ಇಲ್ಲಿನ ಇಂಟರ್ನೆಟ್ ಸಿಟಿಗೆ ಆಹ್ವಾನಿಸಲಾಗುವುದು. ನಂತರ ಅತ್ಯುತ್ತಮ 25 ವರದಿಗಳನ್ನು ಆರಿಸಲಾಗುವುದು. ಸ್ವೀಕೃತ 25 ವರದಿಗಳನ್ನು ಸಾದರಪಡಿಸುವ ಕಂಪನಿಗಳು ಎರಡು ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತ-ವೆ. ತರಬೇತಿ ಶಿಬಿರದಲ್ಲಿ ತಜ್ಞರು ವರದಿಗಳನ್ನು ಇನ್ನಷ್ಟು ಉತ್ತಮಪಡಿಸಲು ಸಹಾಯ ಮಾಡುವರು.
ಇ-ವಾಣಿಜ್ಯ ಸಂಕೀರ್ಣ : ಇಲ್ಲಿ ಉತ್ತಮಪಡಿಸಲಾದ ವರದಿಗಳನ್ನು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಸಲ್ಲಿಸಲಾಗುವುದು. ಈ ಸ್ಪರ್ಧೆಯನ್ನು ಎಮಿರೇಟ್ಸ್ ಬ್ಯಾಂಕ್ ಗ್ರೂಪ್, ಹಾಲೆಟ್ ಪ್ಯಾಕರ್ಡ್, ಐಬಿಎಂ, ಮಾಸ್ಟರ್ ಕಾರ್ಡ್, ಮೈಕ್ರೋಸಾಫ್ಟ್ ಮತ್ತು ಆರೇಕಲ್ ಇಂಟರ್ನೆಟ್ ಕಂಪನಿಗಳು ಜಂಟಿಯಾಗಿ ಆಯೋಜಿಸಿವೆ.
ಯುಎಇ, ಲೆಬನಾನ್, ಕವೈತ್, ಜೋರ್ಡಾನ್, ಸಿರಿಯಾ, ಮೊರೊಕ್ಕೋ, ಇರಾನ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಯೋಜನಾವರದಿಗಳನ್ನು ಕಳಿಸಿರುವ ಕೆಲವು ಕಂಪನಿಗಳು ಈಗಾಗಲೇ ತಮ್ಮ ಇ-ವಾಣಿಜ್ಯ ಸಂಕೀರ್ಣಗಳನ್ನು ದುಬೈನಲ್ಲಿ ತೆರದಿವೆ.
ಮಾಹಿತಿ ತಂತ್ರಜ್ಞಾನದಲ್ಲಿ ದಾಪುಗಾಲಿಡುತ್ತಿರುವ ಭಾರತದ ಜೊತೆಗೆ ಸಹಯೋಗಕ್ಕಾಗಿ ದುಬೈನ ಅನೇಕ ಕಂಪನಿಗಳು ಆಸಕ್ತಿ ತೋರಿಸಿವೆ. ಆರ್ಥಿಕವಾಗಿ ಸದೃಢ ಸಂಸ್ಥೆಯಾಗಿರುವ ಇಲ್ಲಿನ ಎಮಿರೇಟ್ಸ್ ಬ್ಯಾಂಕ್ ಗ್ರೂಪ್ ಭಾರತದ ಐಸಿಐಸಿಐನೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಇಂಟರ್ನೆಟ್ ಸಿಟಿಯ ಮಾದಲ ಹಂತ ಅಕ್ಟೋಬರ್ ವೇಳೆಗೆ ಮುಗಿಯಲಿದ್ದು, ಪ್ರಸಿದ್ಧ ಅಂತಾರಾಷ್ಟ್ರೀಯ ಕಂಪನಿಗಳು ಹೈಟೆಕ್ ಸಿಟಿಯಲ್ಲಿ ತಮ್ಮ ಮಳಿಗೆಗಳನ್ನು ಸ್ಥಾಪಿಸಲಿವೆ.
ಇಂಟರ್ನೆಟ್ ಸಿಟಿಯ ಸ್ಥಾಪನೆಗೆ ದುಬೆಗೆ ಭಾರತದ ಸಹಕಾರ ನೀಡಲಿದೆ. ಈ ಸಂಬಂಧ ಒಪ್ಪಂಧವನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಭಾರತ ಸೇರಿದಂತೆ ಜಾಗತಿಕ ಮಟ್ಟದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳು ಒಟ್ಟು 250 ಮಿಲಿಯನ್ ಡಾಲರ್ ಹಣ ಹೂಡಲು ಮುಂದೆ ಬಂದಿವೆ ಎಂದು ಸಂಘಟಕರು ತಿಳಿಸಿದ್ದಾರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications