ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರಕಾರವೇ ಮಕ್ಕಳ ಚಿತ್ರ ತಯಾರಿಸಬೇಕು
ತುಮಕೂರು : ವರ್ಷಕ್ಕೆ ಕೊನೇ ಪಕ್ಷ ಎರಡು ಮಕ್ಕಳ ಚಿತ್ರವನ್ನಾದರೂ ಸರಕಾರವೇ ನಿರ್ಮಿಸಬೇಕು ಎಂದು ಚಿತ್ರ ನಟ ಹಾಗೂ ನಿರ್ದೇಶಕ ವಾದಿರಾಜ್ ಹೇಳಿದ್ದಾರೆ.
ಅವರು ಭಾನುವಾರ, ಹತ್ತು ದಿನಗಳ ಮಕ್ಕಳ ಚಲನ ಚಿತ್ರೋತ್ಸವದ ಉದ್ಘಾಟನಾ ಭಾಷಣ ಮಾಡುತ್ತಿದ್ದರು. ಮಕ್ಕಳ ಚಿತ್ರ ವನ್ನು ತಯಾರಿಸುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಯುವಕರು ನೋಡುವಂತಹ ಚಿತ್ರಗಳನ್ನೇ ಮಕ್ಕಳೂ ನೋಡಬೇಕಾಗಿದೆ. ಕೊಲೆ, ಸುಲಿಗೆ, ಅತ್ಯಾಚಾರಗಳಂತಹ ದೃಶ್ಯಗಳಿರುವ ಚಿತ್ರಗಳನ್ನು ಮಕ್ಕಳು ನೋಡುವಂತಾಗಿದೆ ಎಂದರು.
ಭವಿ-ಷ್ಯ-ದ-ಲ್ಲಿ ದೇಶದ ಚುಕ್ಕಾಣಿ ಹಿಡಿಯಬೇಕಾಗಿರುವ ಮಕ್ಕಳನ್ನು ರೂಪಿಸುವ ಜವಾಬ್ದಾರಿ ನಮ್ಮ ಮೇಲಿರುವು-ದ-ರಿಂ-ದ, ಸದ-ರ-ಭಿ-ರು-ಚಿ-ಯ ಮಕ್ಕ-ಳ ಚಿತ್ರ-ಗ-ಳ-ನ್ನು ಸರ್ಕಾ-ರ ನಿರ್ಮಿ-ಸಿ ಎಲ್ಲ ಶಾಲೆಗಳಲ್ಲಿಯೂ ಅದನ್ನು ಪ್ರದರ್ಶಿಸಬೇಕು ಎಂದು ವಾದಿರಾಜ್ ಹೇಳಿದರು. ಕಾರ್ಯಕ್ರಮದಲ್ಲಿ ಕೃಷಿ ಸಚಿವ ಟಿ.ಬಿ. ಜಯಚಂದ್ರ, ವಿಧಾನ ಪರಿಷತ್ ಸದಸ್ಯ ಕೆ. ಎನ್. ರಾಜಣ್ಣ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
Comments
Story first published: Monday, September 11, 2000, 5:30 [IST]