ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭೈರಪ್ಪರ ಬಳಿಗೇ ಜ್ಞಾನಪೀಠ ಬರಬೇಕಿತ್ತು - ಮೊೖಲಿ
ಬೆಂಗಳೂರು : ಭೈರಪ್ಪನವರು ಸಾಹಿತ್ಯಕ್ಕೆ ಬದ್ಧರಾಗಿ ಕೆಲಸ ಮಾಡಿದವರು, ಅವರ ಎಲ್ಲ ಕೃತಿಗಳು ಇಂಗ್ಲಿಷ್ ಮತ್ತು ದೇಶದ ಎಲ್ಲ ಭಾಷೆಗಳಿಗೂ ಅನುವಾದಗೊಂಡಿದ್ದು ಜ್ಞಾನ ಪೀಠ ಪ್ರಶಸ್ತಿ ಅವರ ಬಳಿಗೇ ಬರಬೇಕಿತ್ತು ಎಂದು ಮಾಜಿ ಮುಖ್ಯ ಮಂತ್ರಿ ಎಂ. ವೀರಪ್ಪ ಮೊೖಲಿ ಶನಿ-ವಾ-ರ ಹೇಳಿದ್ದಾರೆ.
ಜನಪ್ರಿಯ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ‘ಧರ್ಮಶ್ರೀ’ ಮತ್ತು ‘ಸಾರ್ಥ’ ಕಾದಂಬರಿಗಳ ಸಂಸ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿ ಅವ-ರು ಮಾತನಾಡುತ್ತಿದ್ದರು. ಭಾರತೀಯ ಸಂಸ್ಕೃತಿಯ ಬಗೆಗೆ ಅಪಾರ ಅಭಿಮಾನ ಇಟ್ಟು ಕೊಂಡು ಬರೆಯುವ ಭೈರಪ್ಪನವರನ್ನು ಪ್ರತಿಗಾಮಿ ಎಂದು ಕರೆಯುವುದು ಸಲ್ಲ ಎಂದು ಮೊೖಲಿ ಹೇಳಿದರು.
ಕಾರ್ಯಕ್ರಮದಲ್ಲಿ ಎಚ್.ಎಂ.ಟಿಯ ಅಧ್ಯಕ್ಷ ಎನ್. ರಾಮಾನುಜ ಮತ್ತು ಸಾಹಿತಿ ವ್ಯಾಸರಾಯ ಬಲ್ಲಾಳರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಂಸ್ಕೃತ ಭಾರತಿ ಪ್ರಕಾಶನ ಆಯೋಜಿಸಿತ್ತು.
(ಇನ್ಫೋ ವಾರ್ತೆ)
Comments
Story first published: Sunday, September 10, 2000, 5:30 [IST]