ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತು-ಕ-ತೆ ಯಶ-ಸ್ವಿ, ಟೆಲಿಕಾಂ ನೌಕ-ರ-ರ ಮುಷ್ಕರ ಅಂತ್ಯ

By Staff
|
Google Oneindia Kannada News

ನವ-ದೆ-ಹ-ಲಿ : ದೂರ ಸಂಪರ್ಕ ಇಲಾಖೆಯನ್ನು ಕಾರ್ಪೊರೇಟ್‌ ಸಂಸ್ಥೆಯನ್ನಾಗಿ ಪರಿವರ್ತಿಸಿದ ನಂತರ ನೌಕರರಿಗೆ ಉದ್ಯೋಗ ಭದ್ರತೆಯನ್ನು ನೀಡಲಾಗುವುದು ಎಂದು ಕೇಂದ್ರ ಸರಕಾರ ಭರವಸೆ ನೀಡಿರುವು-ದರಿಂದ ಟೆಲಿಕಾಂ ನೌಕರರು ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ಶುಕ್ರವಾರ ಹಿಂತೆಗೆದುಕೊಂಡಿದ್ದಾರೆ.

ಮುಷ್ಕರ ನಡೆಸುತ್ತಿದ್ದ ಟೆಲಿಕಾಂ ಇಲಾಖೆ ನೌಕರರು, ಯೂನಿಯನ್‌ಗಳ ಪ್ರಮುಖರು ಮತ್ತು ಕೇಂದ್ರ ದೂರಸಂಪರ್ಕ ಇಲಾಖೆ ಸಚಿವ ರಾಮವಿಲಾಸ್‌ ಪಾಸ್ವಾನ್‌ ನಡುವೆ ನಡೆದ ಮಾತುಕತೆಯ ವೇಳೆ ನೌಕರರ ಬೇಡಿಕೆಗಳ-ನ್ನು ಈಡೇ-ರಿ-ಸ-ಲು ಸಚಿವರು ಸಮ್ಮತಿಸಿದ್ದಾರೆ. ದೂರಸಂಪರ್ಕ ಇಲಾಖೆ , ಕಾರ್ಪೊರೇಟ್‌ ಸಂಸ್ಥೆಯಾಗಿ ಬದಲಾದರೂ ನೌಕರರಿಗೆ ನಿವೃತ್ತಿ ವೇತನ, ಉದ್ಯೋಗ ಭದ್ರತೆ, ಜಿಪಿಎಫ್‌ ಸೌಲಭ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಸರಕಾರ ಒಪ್ಪಿದೆ.

ಮುಷ್ಕರವನ್ನು ಹಿಂತೆಗೆದುಕೊಂಡಿರುವುದಾಗಿ ಘೋಷಿಸಿದ ಕಾರ್ಮಿಕ ನಾಯಕ ಕೆ. ವೆಳ್ಳಿ ನಾಯಗಂ ಮತ್ತು ಓ.ಪಿ. ಗುಪ್ತಾ ಭಾರತ ಸಂಚಾರ ನಿಗಮಕ್ಕೆ ಟೆಲಿಕಾಂ ಇಲಾಖೆಯ ಎಲ್ಲ ನೌಕರರು ಸೇರುವುದರಲ್ಲಿ ಅನುಮಾನವಿಲ್ಲ ಎಂದರು. ಶನಿವಾರದಿಂದ ಎಲ್ಲ ನೌಕರರು ಕೆಲಸಕ್ಕೆ ಹಾಜರಾಗಲಿದ್ದು, ಅಸ್ತವ್ಯಸ್ತಗೊಂಡಿರುವ ಎಲ್ಲ ಸಂಪರ್ಕ ಜಾಲವನ್ನು ಸರಿಪಡಿಸಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಅಕ್ಟೋಬರ್‌ ಒಂದರಿಂದ ಟೆಲಿಕಾಂ ಇಲಾಖೆ ಭಾರತ ಸಂಚಾರ ನಿಗಮ ನಿಯಮಿತ ಸಂಸ್ಥೆಯಡಿ ಕೆಲಸ ಮಾಡಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X