Get Updates
Get notified of breaking news, exclusive insights, and must-see stories!

ಅಣ್ಣಾ-ವ್ರು- ಈಗ ತಮಿ-ಳು ನೆಲ-ದ-ಲ್ಲೂ ಜನ-ಪ್ರಿ-ಯ-ರು : ರಜ-ನಿ-ಕಾಂ-ತ್‌

ಬೆಂಗಳೂರು : ರಾಜ್‌ಕುಮಾರ್‌ ಬಿಡುಗಡೆಗಾಗಿ ಕನ್ನಡಿಗರೊಂದಿಗೆ ತಮಿಳುನಾಡಿನ ಜನತೆಯೂ ನಿತ್ಯ ಪ್ರಾರ್ಥಿಸುತ್ತಿದೆ ಎಂದು ತಮಿಳು ನಟ ರಜನೀಕಾಂತ್‌ ಹೇಳಿದ್ದಾರೆ.

ಅಡ-ಗು-ತಾ-ಣ-ದಿಂ-ದ ಬಂದ ಕ್ಯಾಸೆ-ಟ್‌-ಗ-ಳ-ಲ್ಲಿ ಕಾಡಿ-ನ-ಲ್ಲಿ-ರು-ವ ರಾಜ್‌ ಅವ-ರ-ನ್ನು ತಮಿ-ಳು-ನಾ-ಡಿ-ನ ಜನ-ತೆ ನೋಡಿ-ದ್ದಾ-ರೆ. ರಾಜ್‌ ಅವ-ರ ಸರ-ಳತೆ, -ಎ-ಪ್ಪ-ತ್ತ-ರ ವಯ-ಸ್ಸಿ-ನ-ಲ್ಲೂ ಅವ-ರು ಕಾಪಾ-ಡಿ-ಕೊಂ-ಡು ಬಂದಿ-ರು-ವ ಶಿಸ್ತು ಜನ-ರನ್ನು ಮೋಡಿ ಮಾ-ಡಿ-ದೆ. ರಾ-ಜ್‌ ಈಗ ತಮಿ-ಳು-ನಾ-ಡಿ-ನ-ಲ್ಲೂ ಜನ-ಪ್ರಿ-ಯ-ರು. ಅವ-ರ ಬಿಡು-ಗ-ಡೆ-ಗಾ-ಗಿ ಹೃತ್ಪೂ-ರ್ವ-ಕ-ವಾ-ಗಿ ತ-ಮಿ-ಳು ಜನ-ತೆ ಪ್ರಾರ್ಥಿ-ಸು-ತ್ತಿ-ದೆ ಎಂ-ದು ರಜ-ನಿ-ಕಾಂ-ತ್‌ ಹೇಳಿ-ದ-ರು. ಸಂಧಾನಕಾರ ನಕ್ಕೀರನ್‌ ಗೋಪಾಲ್‌ ಜೊತೆ ಬುಧ-ವಾ-ರ ರಾತ್ರಿ ಬೆಂಗಳೂರಿಗೆ ಬಂದಿದ್ದ ರಂಜನಿಕಾಂತ್‌, ರಾಜ್‌ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ರಾಜ್‌ಕುಮಾರ್‌ ಯಾವುದೇ ತೊಂದರೆಯಿಲ್ಲದೆ ನಾಡಿಗೆ ಬರುತ್ತಾರೆ ಎನ್ನುವ ನಂಬಿಕೆ ತಮಗಿದೆ, ಅವರ ಬಿಡುಗಡೆಗಾಗಿ ಸರಳ ಮಾರ್ಗವನ್ನು ಅನುಸರಿಸಬೇಕೇ ಹೊರತು ತುರ್ತು ಕಾರ್ಯಾಚರಣೆಯ ಅಗತ್ಯವಿಲ್ಲ . ಈ ಸಂದ-ರ್ಭ-ದ-ಲ್ಲಿ ಕಾರ್ಯ-ತಂ-ತ್ರ-ದ ಬದ-ಲಾ-ವ-ಣೆ-ಯ ಅಗ-ತ್ಯ-ವೂ- ಇಲ್ಲ . ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳಬಾರದು ಎಂದ ರಜ-ನಿ-ಕಾಂ-ತ್‌, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳೂ ಸೇರಿದಂತೆ ಎಲ್ಲರೂ ಅವರ ಬಿಡುಗಡೆಯ ಪ್ರಯತ್ನವನ್ನೇ ಬೆಂಬಲಿಸುತ್ತಿದ್ದಾರೆ. ಆದ್ದರಿಂದ ಈ ವಿಷಯದಲ್ಲಿ ಯಾವುದೇ ಬಿಕ್ಕಟ್ಟು ತಲೆದೋರುವ ಸಂಭವವೇ ಇಲ್ಲ ಎಂದರು.

ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ರಾಜ್‌ ಬಿಡುಗಡೆಗಾಗಿ ಸರ್ವ ಪ್ರಯತ್ನ ಮಾಡುತ್ತಿವೆ. ಈ ಎಲ್ಲ ಪ್ರಯತ್ನಗಳು ವ್ಯರ್ಥವಾಗುವುದು ಸಾಧ್ಯವಿಲ್ಲ. ರಾಜ್‌ ಬಿಡುಗಡೆಯಾಗುತ್ತಾರೆ ಎನ್ನುವ ಅಚಲ ವಿಶ್ವಾಸ ತಮಗಿದೆ ಎಂದು ರಜನಿಕಾಂತ್‌ ಒತ್ತಿ ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+