ಅಣ್ಣಾ-ವ್ರು- ಈಗ ತಮಿ-ಳು ನೆಲ-ದ-ಲ್ಲೂ ಜನ-ಪ್ರಿ-ಯ-ರು : ರಜ-ನಿ-ಕಾಂ-ತ್
ಬೆಂಗಳೂರು : ರಾಜ್ಕುಮಾರ್ ಬಿಡುಗಡೆಗಾಗಿ ಕನ್ನಡಿಗರೊಂದಿಗೆ ತಮಿಳುನಾಡಿನ ಜನತೆಯೂ ನಿತ್ಯ ಪ್ರಾರ್ಥಿಸುತ್ತಿದೆ ಎಂದು ತಮಿಳು ನಟ ರಜನೀಕಾಂತ್ ಹೇಳಿದ್ದಾರೆ.
ಅಡ-ಗು-ತಾ-ಣ-ದಿಂ-ದ ಬಂದ ಕ್ಯಾಸೆ-ಟ್-ಗ-ಳ-ಲ್ಲಿ ಕಾಡಿ-ನ-ಲ್ಲಿ-ರು-ವ ರಾಜ್ ಅವ-ರ-ನ್ನು ತಮಿ-ಳು-ನಾ-ಡಿ-ನ ಜನ-ತೆ ನೋಡಿ-ದ್ದಾ-ರೆ. ರಾಜ್ ಅವ-ರ ಸರ-ಳತೆ, -ಎ-ಪ್ಪ-ತ್ತ-ರ ವಯ-ಸ್ಸಿ-ನ-ಲ್ಲೂ ಅವ-ರು ಕಾಪಾ-ಡಿ-ಕೊಂ-ಡು ಬಂದಿ-ರು-ವ ಶಿಸ್ತು ಜನ-ರನ್ನು ಮೋಡಿ ಮಾ-ಡಿ-ದೆ. ರಾ-ಜ್ ಈಗ ತಮಿ-ಳು-ನಾ-ಡಿ-ನ-ಲ್ಲೂ ಜನ-ಪ್ರಿ-ಯ-ರು. ಅವ-ರ ಬಿಡು-ಗ-ಡೆ-ಗಾ-ಗಿ ಹೃತ್ಪೂ-ರ್ವ-ಕ-ವಾ-ಗಿ ತ-ಮಿ-ಳು ಜನ-ತೆ ಪ್ರಾರ್ಥಿ-ಸು-ತ್ತಿ-ದೆ ಎಂ-ದು ರಜ-ನಿ-ಕಾಂ-ತ್ ಹೇಳಿ-ದ-ರು. ಸಂಧಾನಕಾರ ನಕ್ಕೀರನ್ ಗೋಪಾಲ್ ಜೊತೆ ಬುಧ-ವಾ-ರ ರಾತ್ರಿ ಬೆಂಗಳೂರಿಗೆ ಬಂದಿದ್ದ ರಂಜನಿಕಾಂತ್, ರಾಜ್ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ರಾಜ್ಕುಮಾರ್ ಯಾವುದೇ ತೊಂದರೆಯಿಲ್ಲದೆ ನಾಡಿಗೆ ಬರುತ್ತಾರೆ ಎನ್ನುವ ನಂಬಿಕೆ ತಮಗಿದೆ, ಅವರ ಬಿಡುಗಡೆಗಾಗಿ ಸರಳ ಮಾರ್ಗವನ್ನು ಅನುಸರಿಸಬೇಕೇ ಹೊರತು ತುರ್ತು ಕಾರ್ಯಾಚರಣೆಯ ಅಗತ್ಯವಿಲ್ಲ . ಈ ಸಂದ-ರ್ಭ-ದ-ಲ್ಲಿ ಕಾರ್ಯ-ತಂ-ತ್ರ-ದ ಬದ-ಲಾ-ವ-ಣೆ-ಯ ಅಗ-ತ್ಯ-ವೂ- ಇಲ್ಲ . ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳಬಾರದು ಎಂದ ರಜ-ನಿ-ಕಾಂ-ತ್, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳೂ ಸೇರಿದಂತೆ ಎಲ್ಲರೂ ಅವರ ಬಿಡುಗಡೆಯ ಪ್ರಯತ್ನವನ್ನೇ ಬೆಂಬಲಿಸುತ್ತಿದ್ದಾರೆ. ಆದ್ದರಿಂದ ಈ ವಿಷಯದಲ್ಲಿ ಯಾವುದೇ ಬಿಕ್ಕಟ್ಟು ತಲೆದೋರುವ ಸಂಭವವೇ ಇಲ್ಲ ಎಂದರು.
ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ರಾಜ್ ಬಿಡುಗಡೆಗಾಗಿ ಸರ್ವ ಪ್ರಯತ್ನ ಮಾಡುತ್ತಿವೆ. ಈ ಎಲ್ಲ ಪ್ರಯತ್ನಗಳು ವ್ಯರ್ಥವಾಗುವುದು ಸಾಧ್ಯವಿಲ್ಲ. ರಾಜ್ ಬಿಡುಗಡೆಯಾಗುತ್ತಾರೆ ಎನ್ನುವ ಅಚಲ ವಿಶ್ವಾಸ ತಮಗಿದೆ ಎಂದು ರಜನಿಕಾಂತ್ ಒತ್ತಿ ಹೇಳಿದರು.
(ಇನ್ಫೋ ವಾರ್ತೆ)