ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾಣಿ-ಮೈಸೂರು -ರ-ಸ್ತೆ ಅಭಿ-ವೃ-ದ್ಧಿ-ಗೆ 120 ಕೋಟಿ ರು. ಯೋಜ-ನೆ
ಮಡಿಕೇರಿ : ಮಾಣಿ- ಮೈಸೂರು ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಹುಡ್ಕೋ ಸಹಾಯದೊಂದಿಗೆ 120 ಕೋಟಿ ರೂಪಾಯಿ ವೆಚ್ಚದ ಯೋಜನೆ ತಯಾರಿಸಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ವಿ.ಧನಂಜಯ್ ಕುಮಾರ್ ಹೇಳಿದ್ದಾರೆ.
ಬುಧವಾರ ಪಯಸ್ವಿನಿ ಸಹಕಾರಿ ಬ್ಯಾಂಕ್ನ ಸಂಪಾಜೆ ಶಾಖೆ ಕಟ್ಟದ ಶಂಕು ಸ್ಥಾಪನೆ ಮಾಡಿ ಮಾತನಾಡುತ್ತಿದ್ದ ಅವ-ರು, ಎಲ್ಆ್ಯಂಡ್ ಟಿ ಸಂಸ್ಥೆಯು ರಸ್ತೆ ಅಭಿವೃದ್ಧಿಗೆ ಅಂದಾಜು ಯೋಜನೆಯನ್ನು ರೂಪಿಸಿದೆ. ಮಾಣಿ ಮತ್ತು ಮೈಸೂರು ನಡುವೆ ರಾಜ್ಯ ಹೆದ್ದಾರಿ ನಿರ್ಮಿಸುವಾಗ ಕೋಯಿ ನಾಡು, ಹಳೇ ಗೇಟು ಮತ್ತು ಕೊಲ್ಬಾರ್ ಪ್ರದೇಶಗಳಲ್ಲಿ ಸೇತುವೆಗಳ ಅಭಿವೃದ್ಧಿಗೂ ಹಣ ವ್ಯಯಿಸಲಾಗುವುದು ಎಂದರು.
ಕಾವೇರಿ ಉಗಮ ಸ್ಥಾನ ತಲಕಾವೇರಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡುತ್ತಾ ಅವರು, ಮುಜರಾಯಿ ಇಲಾಖೆ ಈ ಪುಣ್ಯ ಕ್ಷೇತ್ರದ ಅಭಿವೃದ್ಧಿಗೆ ಹಣ ಮಂಜೂರು ಮಾಡಿ ಕ್ರಮ ಕೈಗೊಳ್ಳಬೇಕು ಎಂದರು.
(ಮೈಸೂ-ರು ಪ್ರತಿ-ನಿ-ಧಿ-ಯಿಂ-ದ)
Comments
Story first published: Thursday, September 7, 2000, 5:30 [IST]