ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೋಲಾರದಲ್ಲಿ ಕರಳು ಬೇನೆ : ಒಂದು ಸಾವು
ಕೋಲಾರ : ಜಿಲ್ಲೆಯಲ್ಲಿ ಪುನಃ ಕರಳು ಬೇನೆ ಕಾಣಿಸಿಕೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿರುವ ವರದಿಯಾಗಿದೆ.
ಕಲುಷಿತ ಆಹಾರ ಸೇವನೆಯಿಂದಾಗಿ ಚಿಟ್ನಹಳ್ಳಿ ಗ್ರಾಮದ ಎಸ್. ನಾರಾಯಣ ಸ್ವಾಮಿ(65) ಬುಧವಾರ ಮೃತರಾಗಿದ್ದು, ಕರುಳು ಬೇನೆಯಿಂದ ನರಳುತ್ತಿರುವ ಗ್ರಾಮದ ಇತರ 12 ಮಂದಿಯನ್ನು ಎಸ್. ಎನ್. ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯ ಮಲ್ಲಾಂಡಹಳ್ಳಿಯೂ ಸೇರಿದಂತೆ ಇತರ ಗ್ರಾಮಗಳಲ್ಲಿ ಕರಳು ಬೇನೆ ಕಾಣಿಸಿಕೊಂಡಿದ್ದು, ರೋಗ ಹರಡದಂತೆ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
(ಇನ್ಫೋ ವಾರ್ತೆ)
Story first published: Thursday, September 7, 2000, 5:30 [IST]