ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಇಂಥ ದಿನ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿ’
ಚೆನ್ನೈ : ಶುಕ್ರವಾರ ರಾತ್ರಿ ವೀರಪ್ಪನ್ ಮತ್ತೊಂದು ವಿಡಿಯೋ ಕ್ಯಾಸೆಟ್ ಕಳುಹಿಸಿಕೊಟ್ಟಿದ್ದು, ತನ್ನ ಬೇಡಿಕೆಗಳಿಗೆ ಪಕ್ಕಾ ಉತ್ತರ ನೀಡಬೇಕೆಂದು ಪುನರಾಗ್ರಹಿಸಿದ್ದಾನೆ ಎಂದು ನಕ್ಕೀರನ್ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕ್ಯಾಸೆಟ್ನಲ್ಲಿ ರಾಜ್ ಮತ್ತೆ ತಮ್ಮ ಆರೋಗ್ಯದ ಬಗೆಗೆ ಮಾತನಾಡಿದ್ದಾರೆ. ವೀರಪ್ಪನ್ ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಗಳ ಕುರಿತು ಈ ಬೇಡಿಕೆಗಳ ಬಗೆಗೆ ಮಾತನಾಡಿದ್ದಾನೆ:
- ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು ಯಾವ ದಿನ ಸ್ಥಾಪಿಸಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಪ್ರತಿ-ಮೆ ಅನಾ-ವ-ರ-ಣ-ದ ದಿನಾಂ-ಕ-ವನ್ನು ಉಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳು ಆಕಾ-ಶ-ವಾ-ಣಿ-ಯ-ಲ್ಲಿ ಘೋಷಿ-ಸ-ಬೇ-ಕು.
- ಎಸ್ಟಿಎಫ್ ಸಂತ್ರಸ್ತರ ವಿಷಯವಾಗಿ ವಿಚಾರಣೆ ನಡೆಸುತ್ತಿರುವ ಸದಾಶಿವ ಆಯೋಗ ಯಾವ ದಿನಾಂಕದಿಂದ ತನ್ನ ವಿಚಾರಣೆಯನ್ನು ಪುನರಾರಂಭಿಸಲಿದೆ ಎಂಬುದನ್ನು ತಿಳಿಸಬೇಕು.
- ರಾಜ್ ಹಾಗೂ ಉಗ್ರರ ಬಿಡುಗಡೆ ಏಕಕಾಲದಲ್ಲಿ ಆಗಬೇಕು ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ .
ಸಾಳ್ವೆ ಬಂದ ನಂತರ ಮುಂದಿನ ಕ್ರಮ : ಟಾಡಾ ಬಂದಿಗಳ ಬಿಡುಗಡೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಹೊರಡಿಸಿದ್ದು, ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಅಟಾರ್ನಿ ಜನರಲ್ ಹರೀಶ್ ಸಾಳ್ವೆ ಬಂದ ನಂತರ ತೀರ್ಮಾನಿಸಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Saturday, September 2, 2000, 5:30 [IST]