Get Updates
Get notified of breaking news, exclusive insights, and must-see stories!

ರಾಜ್‌ ಅಪಹರಣ ತೆರಿಗೆ ವಸೂಲಾತಿ ಮೇಲೆ ಪರಿಣಾಮ ಬೀರಿಲ್ಲ : ಶಿವಣ್ಣ

ಬೆಂಗಳೂರು : ರಾಜ್‌ ಹಾಗೂ ಇತರ ಮೂವರನ್ನು ವೀರಪ್ಪನ್‌ ಅಪಹರಿಸಿರುವುದು ತೆರಿಗೆ ವಸೂಲಾತಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಎಂ. ಶಿವಣ್ಣ ಹೇಳಿದ್ದಾರೆ.

ಇನ್ನು ನಾಲ್ಕೈದು ತಿಂಗಳಲ್ಲಿ ಖಜಾನೆ ಗಣಕೀಕೃತ : ತೆರಿಗೆ ವಸೂಲಾತಿಯ ಪ್ರಮಾಣ ಸ್ವಲ್ಪ ಕಡಿಮೆಯಾಗಿರಬಹುದು. ಆದರೂ ನಾವು ಅಂದುಕೊಂಡಿರುವ 6100 ಕೋಟಿ ರುಪಾಯಿಗಳ ತೆರಿಗೆ ವಸೂಲಾತಿ ಗುರಿಯನ್ನು ಮುಟ್ಟುತ್ತೇವೆ ಎಂದು ಶಿವಣ್ಣ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ತೆರಿಗೆ ವಸೂಲಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸೆಪ್ಟೆಂಬರ್‌ 7ರಿಂದ ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಮಾಡಲಿದ್ದೇನೆ. ವರಮಾನ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ಕಟ್ಟದ ಸಣ್ಣ ಪುಟ್ಟ ವ್ಯಾಪಾರಿಗಳನ್ನು ಮಾತ್ರ ಹಿಡಿಯುತ್ತಿದ್ದಾರೆ. ದೊಡ್ಡ ಮೀನುಗಳಿಗೆ ಗಾಳ ಹಾಕುತ್ತಿಲ್ಲ. ಅಂಥವರಿಂದ ತೆರಿಗೆ ವಸೂಲಾತಿಗೆ ಆದೇಶ ನೀಡಲಾಗುವುದು. ತೆರಿಗೆ ಕಟ್ಟದ ದೊಡ್ಡ ವ್ಯಾಪಾರಿಗಳ ಮನೆ, ಅಂಗಡಿಗಳ ಮೇಲೆ ದಾಳಿ ನಡೆಸುವಂತೆ ಸೂಚಿಸಲಾಗುವುದು. ಖಜಾನೆಯ ಕಾರ್ಯಾಚರಣೆಯನ್ನು ಗಣಕೀಕೃತಗೊಳಿಸುವ ಪ್ರಯತ್ನಗಳು ನಡೆದಿದ್ದು, ಇನ್ನು ನಾಲ್ಕೈದು ತಿಂಗಳಲ್ಲಿ ಅದು ಸಾಧ್ಯವಾಗಲಿದೆ ಎಂದರು.

ಆನೆಗಳ ತಡೆಗೆ ಹಳ್ಳ : ಹೆಗ್ಗಡದೇವನ ಕೋಟೆ ಮತ್ತು ಗುಂಡ್ಲುಪೇಟೆ ತಾಲೂಕುಗಳಲ್ಲಿ ಆನೆಗಳು ಹಳ್ಳಿಗಳ ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡದಂತೆ ಹಳ್ಳಗಳನ್ನು ತೋಡಲು ಸರ್ಕಾರ 1.91 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಹೆಗ್ಗಡದೇವನ ಕೋಟೆಯಲ್ಲಿನ ತಾರಕ ನೀರಾವರಿ ಯೋಜನೆ ಮುಂದಿನ ವರ್ಷ ಜೂನ್‌ ಹೊತ್ತಿಗೆ ಪೂರ್ಣಗೊಳ್ಳಲಿದೆ. ಈವರೆಗೆ 27 ಕೋಟಿ ರುಪಾಯಿಗಳನ್ನು ಯೋಜನೆಗಾಗಿ ಖರ್ಚು ಮಾಡಿದ್ದು, ಅದು ಪೂರ್ಣಗೊಳ್ಳಲು ತಕ್ಷಣವೇ ಇನ್ನೂ 4.5 ಕೋಟಿ ರುಪಾಯಿ ಬೇಕಾಗಿದೆ. ಈ ಯೋಜನೆಯಿಂದ 30 ಸಾವಿರ ಎಕರೆ ಭೂಮಿಗೆ ನೀರಾವರಿ ಲಭ್ಯವಾಗಲಿದೆ ಎಂದರು.

ಜೀತದಾಳುಗಳಿಗೆ ಪುನರ್ವಸತಿ : ಹಂಗರಹಳ್ಳಿಯಲ್ಲಿ ಜೀತದಾಳುಗಳಾಗಿದ್ದವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಮುಗಿದಿದೆ. ಶ್ರೀರಂಗಪಟ್ಟಣದ ಬಳಿ ಅವರಿಗೆ ವಾಸಿಸಲು ಮನೆಗಳನ್ನು ಕಟ್ಟಿ ಕೊಡಲಾಗಿದೆ ಎಂದು ಹೇಳಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+