ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾಗಡಿ ದೇಗುಲದ ಗೋಪುರ ನವೀಕರಣ
ಮಾಗಡಿ : ಇಲ್ಲಿನ ತಿರುಮಲೆ ಶ್ರೀರಂಗನಾಥ ದೇವಸ್ಥಾನದ ಗರ್ಭಗುಡಿ ಮೇಲಿನ ವಿಮಾನ ಗೋಪುರದ ಜೀರ್ಣೋ-ದ್ಧಾ-ರ ಮತ್ತು ಶಿಥಿಲಗೊಂಡಿರುವ ಅಷ್ಟ ಲಕ್ಷ್ಮಿ ವಿಗ್ರಹಗಳ ಬದಲಿಗೆ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಬುಧವಾರದಂದು ಆರಂಭವಾಗಿದೆ.
ತಹಶೀಲ್ದಾರ್ ಎಚ್.ಎಂ. ನಾಗರಾಜು ಹಾಗೂ ದೇವಸ್ಥಾನದ ಧರ್ಮದರ್ಶಿಗಳ ನೇತೃತ್ವದಲ್ಲಿ ಶಾಸ್ತ್ರೋಕ್ತ ವಿಧಿಗಳು ಆರಂಭವಾಗಿದ್ದು , ವಿಮಾನ ಗೋಪುರ ನಿರ್ಮಾಣಕ್ಕಾಗಿ ದಾನಿಗಳಿಂದ ಸುಮಾರು 6 ಲಕ್ಷ ರೂಪಾಯಿ ಸಂಗ್ರಹವಾಗಿರುವುದಾಗಿ ದೇವಸ್ಥಾನದ ಮೂಲಗಳಿಂದ ತಿಳಿದುಬಂದಿದೆ. ಪ್ರತಿ ಲಕ್ಷ್ಮಿ ವಿಗ್ರಹಕ್ಕೆ ಸುಮಾರು 16 ಸಾವಿರ ರೂಪಾಯಿ ಖರ್ಚಾಗಲಿದೆ ಎಂದು ಧರ್ಮದರ್ಶಿಗಳು ಹೇಳಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Thursday, August 31, 2000, 0:00 [IST]