ಮೇರಾ ನಂಬರ್ ಆಯೇಗಾ : ಪೆಪ್ಸಿಯ ಹೊಸ ನಂಬರ್ ಗೇಮ್
ಮುಂಬೈ: ಮುಂಬೈನ ಲಕ್ಷ್ಮೀ ವಿಲಾಸ ಬಾರ್ ಅಂಡ್ ರೆಸ್ಟಾರೆಂಟ್ನಲ್ಲಿ ಸಪ್ಲೈಯರ್ ಆಗಿರುವ ಸುರೇಶ್ಗೌಡ, ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ದಶ ಲಕ್ಷಾಧಿಪತಿಯಾದ ಕತೆ ನಿಮಗೆ ಗೊತ್ತೇ?
ಜನಪ್ರಿಯ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ಅಮಲಿನಲ್ಲಿ ಅನೇಕರು ಒದ್ದಾಡುತ್ತಿರುವಾಗಲೇ ಪೆಪ್ಸಿ ಪಾನೀಯ ಕಂಪೆನಿ, ಹೊಸ ಪ್ರಚಾರ ತಂತ್ರದ ನಂಬರ್ ಗೇಮ್ ಪ್ರಾರಂಭಿಸಿದೆ. ಪೆಪ್ಸಿಯ ಮೇರಾ ನಂಬರ್ ಆಯೇಗಾ ಎಂಬ ಆಫರ್ನ ಫಲಾನುಭವಿ 24ರ ಹರೆಯದ ಸುರೇಶ್ಗೌಡ, ನಮ್ಮ ಈ ಸುದ್ದಿಯ ನಾಯಕ.
ಜೂನ್ ತಿಂಗಳ ಎರಡನೇ ವಾರದಲ್ಲಿ ಆರಂಭವಾದ ಪೆಪ್ಸಿ ಯ ಈ ಹೊಸ ಪ್ರಚಾರ ಕಾರ್ಯಕ್ರಮದಂತೆ ಪೆಪ್ಸಿ ಬಾಟಲಿಯ ಕ್ಯಾಪ್ನಲ್ಲಿನ ನಂಬರ್ಗಳಿಗೆ ಬಹುಮಾನ ನೀಡಲಾಗುತ್ತದೆ. ಮೊನ್ನೆ ಸೋಮವಾರದ ಟಿವಿಯಲ್ಲಿ ಪ್ರಸಾರವಾದ ಬಹುಮಾನ ವಿಜೇತ 647 ನಂಬರಿನ ಕ್ಯಾಪ್ ಸುರೇಶ್ಗೌಡನ ಹತ್ತಿರವಿತ್ತು. ದಶಲಕ್ಷಾಧಿಪತಿ ಗೌಡನಿಗೆ ಈಗ ಈ ಹಣದಿಂದ ತನ್ನ ಮೂವರು ತಂಗಿಯರು ಮತ್ತು ತಮ್ಮನಿಗೆ ನೆಲೆ ಒದಗಿಸುವ ಯೋಚನೆ.
ಆದರೆ ಗೌಡನಿಗೆ ಹತ್ತು ಲಕ್ಷ ಹಣ ಪೂರಾ ದಕ್ಕುವುದಿಲ್ಲ. ಶೇ 40ರಷ್ಟು ತೆರಿಗೆ ತೆಗೆದುಹಾಕಿದರೆ ಉಳಿಯುವುದು 6 ಲಕ್ಷ ಮಾತ್ರ.
ರೆಸ್ಟಾರೆಂಟ್ ಆರಂಭಿಸುವ ಆಸೆಯಿಂದ 8 ವರ್ಷಗಳ ಹಿಂದೆ ಮುಂಬೈಗೆ ಬಂದ ಗೌಡ, ಲಕ್ಷ್ಮೀ ವಿಲಾಸ ಬಾರ್ ಅಂಡ್ ರೆಸ್ಟಾರೆಂಟ್ನಲ್ಲಿ ಸಪ್ಲೈಯರ್. ಮೊದಲಿನಿಂದಲೂ ಎಲ್ಲ ಪಾನೀಯಗಳ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಗೌಡ ಆರಂಭದ ದಿನದಿಂದಲೂ ಕೂಡಿಟ್ಟ ಪೆಪ್ಸಿಯ ಕ್ಯಾಪ್ಗಳ ಅದೃಷ್ಟ ಲಕ್ಷ್ಮಿ ಕೊನೆಗೆ ಒಲಿದಳು.
ಆಫರ್ ಪ್ರಾರಂಭವಾದ ದಿನದಿಂದ ಕ್ಯಾಪ್ಗಳನ್ನು ಕೂಡಿಡುತ್ತಾ ಬಂದ ಗೌಡನ ಅದೃಷ್ಟ ಕೊನೆಗೂ ಕುಲಾಯಿಸಿತು. ಬಾರ್ಗೆ ಬರುತ್ತಿದ್ದ , ಪೆಪ್ಸಿ ಕುಡಿಯುತ್ತಿದ್ದ ಯಾವ ಗಿರಾಕಿಯೂ ಸಾಮಾನ್ಯವಾಗಿ ಬಾಟಲಿಗಳ ಕ್ಯಾಪ್ಗಳನ್ನು ಕೇಳುತ್ತಿರಲಿಲ್ಲ. ಇದರ ಲಾಭ ಪಡೆದ ಗೌಡ ಅವುಗಳನ್ನು ಕೂಡಿಡುತ್ತಾ ಹೋದ.
ಹೊಸ ಪ್ರಚಾರ ತಂತ್ರ ಉತ್ತಮ ಫಲಿತಾಂಶ ನೀಡಿರುವ ಹಿನ್ನಲೆಯಲ್ಲಿ ದೀಪಾವಳಿ ಹಬ್ಬದವರೆಗೆ ಆಫರ್ ಅನ್ನು -ಮುಂದುವರಿಸಲಾಗಿದೆ ಎಂದು ಪೆಪ್ಸಿಯ ವ್ಯ-ವಸ್ಥಾಪಕರು ತಿಳಿಸಿದ್ದಾರೆ. ಯೇ ದಿಲ್ ಮಾಂಗೇ ಮೋರ್ ನಂತರ ಯಶಸ್ವೀ ಅಲೆ ಹುಟ್ಟುಹಾಕಿರುವ ಈ ಹೊಸ ಪ್ರಚಾರ ತಂತ್ರದ ಅಡಿಯಲ್ಲಿ 10 ಸಾವಿರದಿಂದ 10 ಲಕ್ಷದವರೆಗೆ ಬಹುಮಾನವಿದೆ. ಪ್ರತಿ ಬಾಟೆಲ್ ಪೆಪ್ಸಿಯ ಕ್ಯಾಪ್ನಲ್ಲಿ ಮೂರು ಅಂಕಿಗಳ ನಂಬರ್ ಇರುತ್ತದೆ. ಇಂಥ ನಂಬರ್ಗಳ ಸಂಖ್ಯೆ 900.
ಕೊನೆ ಎರಡು ಸಂಖ್ಯೆ ತಾಳೆಯಾದರೂ 10 ಸಾವಿರ ರುಪಾಯಿಗಳ ಒಂದು ಸಾವಿರ ಬಹುಮಾನಗಳು ನಿಮಗೆ ಲಭ್ಯ. ಅಂತಿಮವಾಗಿ ಕೊನೆಯ ಒಂದು ನಂಬರ್ ತಾಳೆಯಾದರೂ ಬಹುಮಾನ ಇದೆ. ಈ ಆಫರ್ನ ಫಲಿತಾಂಶಗಳನ್ನು 15ದಿನಕ್ಕೊಮ್ಮೆ 30 ಸೆಕೆಂಡುಗಳ ಜಾಹೀರಾತಿನಲ್ಲಿ ಪ್ರಸಾರ ಮಾಡಲಾಗುವುದು. ಇದರಲ್ಲಿ ಕೊನೆಯ 15 ಸೆಕೆಂಡುಗಳಲ್ಲಿ ಬಹುಮಾನ ವಿಜೀತ ನಂಬರ್ಗಳನ್ನು ಪ್ರಕಟಿಸಲಾಗುತ್ತದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications