Get Updates
Get notified of breaking news, exclusive insights, and must-see stories!

3ನೇ ಸುತ್ತಿನ ಸಂಧಾನಕ್ಕೆ 28 ರಂದು ಗೋಪಾಲ್‌ ಮತ್ತೆ ಕಾಡಿಗೆ

ಚೆನ್ನೈ : ಎರಡನೇ ಸುತ್ತಿನ ಸಂಧಾನ ಮುಗಿಸಿ ಕಾಡಿನಿಂದ ಮರಳಿದ ಸಂಧಾನಕಾರ ಗೋಪಾಲ್‌ ಮತ್ತೆ ಸೋಮವಾರ ಮೂರನೇ ಸುತ್ತಿನ ಮಾತುಕತೆಗಾಗಿ ತೆರಳುತ್ತಿದ್ದಾರೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ತಿಳಿಸಿದ್ದಾರೆ.

ರಾಜ್‌ಕುಮಾರ್‌ ಬಿಡುಗಡೆ ಸಂಬಂಧ ವೀರಪ್ಪನ್‌ ಅಡಗುತಾಣದಿಂದ ಗುರುವಾರ ಹಿಂತಿರುಗಿದ ಗೋಪಾಲ್‌ ಅವರು ತಂದಿರುವ ಎರಡು ವಿಡಿಯೋ ಕ್ಯಾಸೆಟ್‌ ಹಾಗೂ ಒಂದು ಆಡಿಯೋ ಕ್ಯಾಸೆಟ್‌ನಲ್ಲಿರುವ ವಿಷಯಗಳ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಕರುಣಾನಿಧಿ ಈ ವಿಷಯ ತಿಳಿಸಿದರು.

ಇದಕ್ಕೂ ಮುನ್ನ ಇಂದು ಬೆಳಗ್ಗೆ ಚೆನ್ನೈತಲುಪಿದ ಕೃಷ್ಣ ಅವರು ನೇರವಾಗಿ ಕರುಣಾನಿಧಿ ಅವರ ಕಚೇರಿಗೆ ತೆರಳಿದರು. ಕೃಷ್ಣ ಅವರೊಂದಿಗೆ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಮುಖ್ಯಕಾರ್ಯದರ್ಶಿ ಭಟ್ಟಾಚಾರ್ಯ ಹಾಗೂ ಇನ್ನಿತರ ಉನ್ನತ ಅಧಿಕಾರಿಗಳು ಇದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಕರುಣಾನಿಧಿ ಅವರು, ಮೈಸೂರು ನ್ಯಾಯಾಲಯದ ಮುಂದೆ ವೀರಪ್ಪನ್‌ ಸಹಚರರ ಜಾಮೀನು ಅರ್ಜಿ ಸೋಮವಾರ ಬರಲಿದ್ದು, ಯಾವುದೇ ತೊಂದರೆ ಆಗುವ ಸಾಧ್ಯತೆ ಇಲ್ಲ. ಆದರೆ, ತಮಿಳುನಾಡಿನ ಸೆರೆಮನೆಯಲ್ಲಿರುವ ಐವರು ಉಗ್ರರ ಬಿಡುಗಡೆಗೆ ಕಾನೂನಿನ ತೊಡಕುಗಳಿರುವುದರಿಂದ ವಿಳಂಬವಾಗುತ್ತಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಅರ್ಜಿ ಸಲ್ಲಿಸಿಲ್ಲ

ಬೆಂಗಳೂರು ವರದಿ : ಮೈಸೂರಿನ ನ್ಯಾಯಾಲಯ 51 ಟಾಡಾ ಆರೋಪಿಗಳ ವಿರುದ್ಧದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲು ರಾಜ್ಯ ಸರಕಾರಕ್ಕೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಯಾವುದೇ ಮೇಲ್ಮನವಿ ಸಲ್ಲಿಸಲಾಗಿಲ್ಲ ಎಂದು ರಾಜ್ಯ ಕಾನೂನು ಸಚಿವ ಡಿ.ಬಿ. ಚಂದ್ರೇಗೌಡ ಶುಕ್ರವಾರ ಇಲ್ಲಿ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+