ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೀರಪ್ಪನ್ಗೆ 10 ಕೋಟಿ ರು. ಒತ್ತೆಹಣ ಒಪ್ಪಿಸಲು ಸರಕಾರಗಳ ಸಮ್ಮತಿ
ಚೆನ್ನೈ :ವೀರಪ್ಪನ್ ಮುಂದಿಟ್ಟಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ - ತಮಿಳು ನಾಡು ಸರಕಾರಗಳು ಒಪ್ಪಿಕೊಂಡಿವೆ.
ಎರಡೂ ರಾಜ್ಯಗಳು ತಲಾ 5 ಕೋಟಿ ರೂಪಾಯಿಗಳಂತೆ ಒಟ್ಟು 10 ಕೋಟಿ ರು.ಗಳನ್ನು ವೀರಪ್ಪನ್ಗೆ ಕೊಡಲೊಪ್ಪಿವೆ. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ನೊಂದ ಗ್ರಾಮಸ್ಥರಿಗೆ ಪರಿಹಾರ ಕಲ್ಪಿಸುವ ನಿಧಿಯಾಂದನ್ನು ಸ್ಥಾಪಿಸಲೂ ಎರಡು ಸರಕಾರಗಳು ಸಮ್ಮತಿ ಸೂಚಿಸಿವೆ. ಈ ಬಾಬಿನಲ್ಲಿ ಮತ್ತೆ ತಲಾ 5 ಕೋಟಿ ರು . ಸೇರಿಸಿ ಕರ್ನಾಟಕ-ತಮಿಳುನಾಡು ಸರಕಾರಗಳು ನಿಧಿ ಸ್ಥಾಪಿಸುತ್ತವೆ.
ಈ ಎರಡು ಬೇಡಿಕೆಗಳ ಈಡೇರಿಕೆ ಜತೆಗೆ ವೀರಪ್ಪನ್ ಜತೆಗಾರರನ್ನು ಕಾರಾಗೃಹದಿಂದ ಬಿಡುಗಡೆ ಮಾಡುವುದಕ್ಕೂ ಒಪ್ಪಿಕೊಂಡಿವೆ. ಉಭಯ ಸರಕಾರಗಳ ಈ ನಿರ್ಧಾರವನ್ನು ಹೊತ್ತುಕೊಂಡು ಗೋಪಾಲ್ ಸೋಮವಾರ 28ರಂದು ವೀರಪ್ಪನ್ ಅಡಗುದಾಣಕ್ಕೆ ಹೋಗುತ್ತಾರೆ.
(ಇನ್ಫೊ ಚೆನ್ನೈ ವರದಿ)
Comments
Story first published: Monday, July 31, 2000, 5:30 [IST]