ಸ್ಟಾರ್ಪ್ಲಸ್ ಮೋಡಿಗೆ ಮಂಕಾದ ಚಿತ್ರೋದ್ಯಮ
ಸ್ಟಾ ರ್ಪ್ಲಸ್ನಲ್ಲಿ ಸೋಮವಾರದಿಂದ ಗುರುವಾರದವರೆಗೆ ರಾತ್ರಿ 9ರಿಂದ 10ಗಂಟೆವರೆಗೆ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ಪತಿ, ಈಗ ಎಲ್ಲರ ಮನೆ ಮಾತಾಗಿದೆ. ದಿನಾಂಕ 24ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಕಲ್ಕತ್ತಾದ ರಮೇಶ್ ಚಂದ್ರ ಅವರು 50 ಲಕ್ಷ ರುಪಾಯಿಗಳನ್ನು ತಮ್ಮದಾಗಿಸಿಕೊಂಡರು.
ಈ ಹಿಂದೆ ಈ ಸ್ಪರ್ಧೆಯಲ್ಲಿ ದೆಹಲಿಯ ರಮೇಶ್ ಕುಮಾರ್ ಅರೋರ ಅವರು ಗೆದ್ದಿದ್ದ 25 ಲಕ್ಷ ರುಪಾಯಿಗಳೇ ಅತ್ಯಧಿಕ ಮೊತ್ತ ಆಗಿತ್ತು. ಭಾರಿ ಮೊತ್ತದ ಎರಡೂ ಬಹುಮಾನಗಳು ರಮೇಶ್ ಎಂಬ ಹೆಸರಿನವರಿಗೆ ಬಂದಿರುವುದು ಮತ್ತೊಂದು ವಿಶೇಷ.
ರಮೇಶ್ ಚಂದ್ರ ಅವರು ಕೊನೆಯ ಪ್ರಶ್ನೆಯಾಂದಕ್ಕೆ ಉತ್ತರಿಸಿದ್ದರೆ, ಅವರು ಕರೋಡ್ಪತಿ ಆಗೇ ಹೋಗುತ್ತಿದ್ದರು. ಆದರೆ, ರಮೇಶ್ ಸ್ಪರ್ಧೆಯಿಂದ ಹಿಂತೆಗೆದರು. 50 ಲಕ್ಷ ರುಪಾಯಿಗಳಿಗೇ ತೃಪ್ತಿ ಪಟ್ಟರು. ಒಲಿಂಪಿಕ್ಸ್ನ ಫುಟ್ಬಾಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಹೊಡೆದ ಆಟಗಾರ ಯಾರು? ಎಂಬುದು ಕೋಟಿ ರುಪಾಯಿಯ ಪ್ರಶ್ನೆ ಆಗಿತ್ತು.
ಅದೇನೇ ಇರಲಿ ಕೇವಲ 15-20 ನಿಮಿಷದಲ್ಲಿ 50 ಲಕ್ಷ ಸಂಪಾದಿಸುವುದು ಹುಡುಗಾಟವೇ? ಈಗ ಎಲ್ಲರ ಬಾಯಲ್ಲೂ ಇದೇ ವಿಷಯ. ಒಬ್ಬರಿಗೆ ಸಂತೋಷವಾದರೆ ಮತ್ತೊಬ್ಬರಿಗೆ ದುಃಖವಾಗುವುದು ಸಹಜ. ಈಗ ದೇಶಾದ್ಯಂತ ಚಿತ್ರ ಪ್ರದರ್ಶಕರಿಗೆಲ್ಲ ಕರೋಡ್ಪತಿ ಹೆಸರು ಕೇಳಿದರೇ ಸಿಟ್ಟು ಬರುತ್ತದೆ.
ಚಿತ್ರಮಂದಿರಕ್ಕೆ ಬರುವವರೇ ಇಲ್ಲ : ಹಿಂದಿ ಚಿತ್ರರಂಗದ ಸೂಪರ್ಸ್ಟಾರ್ ಬಿಗ್ಬೀ ಬಚ್ಚನ್ ನಡೆಸಿಕೊಡುತ್ತಿರುವ ಈ ಸ್ಪರ್ಧೆ ಈಗ ಭಾರತದ ಮನೆ ಮಾತು. ಎಲ್ಲರೂ ಸರಿಯಾಗಿ ರಾತ್ರಿ 9 ಗಂಟೆಗೆಲ್ಲಾ ಟಿ.ವಿಯ ಮುಂದೆ ಕುಳಿತು ಬಿಡುತ್ತಾರೆ. ಬೇರೆ ಎಲ್ಲ ಚಾನೆಲ್ಗಳೂ ಈ ಸಮಯದಲ್ಲಿ ಜನಪ್ರಿಯ ಕಾರ್ಯಕ್ರಮ ಪ್ರಸಾರ ಮಾಡಲು ಹಿಂಜರಿಯುತ್ತಿವೆ. ಜಾಹೀರಾತುದಾರರೂ ಕೂಡ ಈ ಸಮಯದಲ್ಲಿ ಬೇರೆ ಚಾನೆಲ್ಗಳಿಗೆ ಜಾಹೀರಾತು ನೀಡುತ್ತಿಲ್ಲ.
ಇತ್ತ ಬೆಂಗಳೂರಿನಲ್ಲಿ ರಾಜ್ ಅಪಹರಣದ ಹಿನ್ನೆಲೆಯಲ್ಲಿ ಚಿತ್ರರಂಗ ಬಂದ್ ಆಗಿದ್ದರೆ, ಅತ್ತ ಬಾಲಿವುಡ್ ಮುಂಬಯಿಯಲ್ಲಿ ಫಸ್ಟ್ಷೋ ಅರ್ಥಾತ್ ರಾತ್ರಿ 9 ಗಂಟೆಯ ಚಿತ್ರ ಪ್ರದರ್ಶನವನ್ನೇ ರದ್ದು ಮಾಡುವ ಸ್ಥಿತಿ ಬಂದಿದೆ. ಎಲ್ಲರೂ ಕೌನ್ಬನೇಗಾ ಕರೋಡ್ಪತಿಗೆ ಅಡಿಕ್ಟ್ ಆಗಿರುವುದರಿಂದ ಫಸ್ಟ್ ಷೋಗೆ ಬರುವವರೇ ಇಲ್ಲವಾಗಿದೆ. ಥಿಯೇಟರ್ಗಳೆಲ್ಲ ಖಾಲಿ ಹೊಡೆಯುತ್ತಿವೆ. ಈ ಬಗ್ಗೆ ಕೆಲವು ಚಿತ್ರ ನಿರ್ಮಾಪಕರು ಬಚ್ಚನ್ಬಳಿಗೆ ಹೋಗಿ ಪ್ರಾರ್ಥಿಸಿದ್ದೂ ಆಗಿದೆ.
ಆದರೆ, ಜನಪ್ರಿಯತೆ ಹಾಗೂ ಹಣ ಎರಡೂ ಸಂಪಾದಿಸುತ್ತಿರುವ ಬಚ್ಚನ್ ಇವರ ಮಾತನ್ನು ಕೇಳಲು ಸಿದ್ಧರಿಲ್ಲವಂತೆ. ಮಿಗಿಲಾಗಿ ಮುಂಬಯಿಯಲ್ಲಿ ಈಗ ಬಚ್ಚನ್ ಚಿತ್ರಕ್ಕೂ ರಾತ್ರಿ 9 ಗಂಟೆಯ ಪ್ರದರ್ಶನಕ್ಕೆ ಬರುವವರಿಲ್ಲವಾಗಿದೆ. ಇದೇ ಸಮಸ್ಯೆಯನ್ನು ದೇಶದ ಎಲ್ಲ ನಗರಗಳ ಚಿತ್ರ ನಿರ್ಮಾಪಕರು ಹಾಗೂ ಪ್ರದರ್ಶಕರು ಎದುರಿಸುತ್ತಿದ್ದಾರೆ. ಕೆಲವರಂತೂ ಎಂದು ಈ ಕಾರ್ಯಕ್ರಮ ಕೊನೆಗೊಳ್ಳುತ್ತದೋ ಎಂದು ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ಜನರಿಗೆ ಮನರಂಜನೆ ಬೇಕು. ಆ ಮನರಂಜನೆ ಹಾಗೂ ಜ್ಞಾನವನ್ನು ಹೆಚ್ಚಿಸುವ ಈ ಕಾರ್ಯಕ್ರಮಕ್ಕೆ ಸದ್ಯಕ್ಕಂತೂ ಸಾಟಿ ಇಲ್ಲ. ಎದುರಿಲ್ಲ. ರಾಮಾಯಣ, ಮಹಾಭಾರತ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕಾಲದಲ್ಲೂ ಇದೇ ರೀತಿಯ ಸಮಸ್ಯೆಯನ್ನು ಚಿತ್ರೋದ್ಯಮ ಎದುರಿಸಿತ್ತು. ಕಾಲಕ್ರಮೇಣ ಮತ್ತೆ ಮರುಜೀವ ಪಡೆಯಿತು. ಈಗ ಮತ್ತೆ ಕುಟುಕು ಜೀವದಿಂದ ನರಳುತ್ತಿದೆ. ಮತ್ತೆ ಮರುಹುಟ್ಟು ಯಾವಾಗ ಪಡೆಯುತ್ತದೋ ನೋಡೋಣ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications