ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗು-ಲ್ಬರ್ಗಾ-ದ-ಲ್ಲಿ ಮೂ-ವ-ತ್ತು ಶಿಕ್ಷ-ಕ-ರಿ-ಗೆ ಸ-ರ್ಕಾ-ರ-ದಿಂದ ಗುರು-ನ-ಮ-ನ

By Staff
|
Google Oneindia Kannada News

ಗುಲ್ಬರ್ಗ : ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ 20 ಮಂದಿ ಪ್ರಾಥಮಿಕ ಶಿಕ್ಷಕರಿಗೆ ಮತ್ತು 10 ಮಂದಿ ಪ್ರೌಢ ಶಾಲಾ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ ಸಂಜೆ ನಡೆಯಲಿದೆ.

ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡುವ-ರು. ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಡೇವಿಡ್‌ ಸಿಮೆಯೋನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಸಚಿವ ಡಾ. ಮಲಕರೆಡ್ಡಿ, ಲೋಕೋಪಯೋಗಿ ಸಚಿವ ಧರ-ಂ ಸಿಂಗ್‌ , ವಸತಿ ಖಾತೆ ಸಚಿವ ಖಮರುಲ್‌ ಇಸ್ಲಾಂ ಮತ್ತು ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ರಾಜ್‌ ಅಪಹರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ.

ಕಾರ್ಯಕ್ರಮದ ವಿಶೇಷತೆ : ಪ್ರಥಮ ಬಾರಿಗೆ ಉತ್ತರ ಕರ್ನಾಟಕದ ಜಿಲ್ಲಾ ಕೇಂದ್ರವೊಂದರಲ್ಲಿ ಇಂಥ ಸಮಾರಂಭವನ್ನು ಏರ್ಪಡಿಸಲಾಗಿದ್ದು, ಪ್ರಶಸ್ತಿ ಪ್ರದಾನದ ವೇಳೆ ಪುಷ್ಪವೃಷ್ಟಿ ಮಾಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ಹೇಳಿದ್ದಾರೆ. ಈ ಕಾರ್ಯಕ್ರಮವನ್ನು ಐತಿಹಾಸಿಕ ಸಮಾರಂಭವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಆಯೋಜಕರು ಶ್ರಮಿಸುತ್ತಿದ್ದಾರೆ. ಸಮಾರಂಭಕ್ಕೆ ಹಾಜರಾಗಲು ಅನುಕೂಲವಾಗುವಂತೆ ಶಾಲೆಗೆ ಅರ್ಧದಿನದ ರಜೆ ಘೋಷಿಸಲಾಗಿದೆ.

ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರು

ಪ್ರಾಥಮಿಕ ಶಾಲಾ ವಿಭಾಗ

  • ಹನುಮಂತ ರಾಯ. ಬಿ, ಸ.ಹಿ. ಪ್ರಾ. ಶಾಲೆ, ಹೊಸಕೇರಿ, ಚಿತ್ರದುರ್ಗ
  • ಕೆ.ಎಂ. ಚಂದ್ರ ಶೇಖರಯ್ಯ, ಸ.ಹಿ. ಪ್ರಾ.ಶಾಲೆ, ಕಾಟನ್‌ ಮಾರ್ಕೆಟ್‌, ದಾವಣಗೆರೆ
  • ಸುಭಾಷ್‌ ಚಂದ್ರ ಸ್ಥಾನಿಕ್‌, ಸರ್ಕಾರಿ ಪೇಡೆ.ಹಿ.ಪ್ರಾ.ಶಾಲೆ, ದೊಡ್ಡಪೇಟೆ, ಶಿವಮೊಗ್ಗ
  • ವೈ.ಎಂ.ಸಿದ್ಧಪ್ಪ , ಸ. ಹಿ. ಪ್ರಾ.ಶಾಲೆ, ಗುಡ್ಡದ ಮಲ್ಲಾಪುರ, ಶಿವಮೊಗ್ಗ
  • ಎಂ.ಎಸ್‌. ನಿಂಗೇಗೌಡ, ಸ.ಹಿ. ಪ್ರಾ. ಶಾಲೆ, ಮಂಡ ಹಳ್ಳಿ, ಮೈಸೂರು
  • ಎಂ.ಪುಂಡಲೀಕ ಗಾಣಿಗ, ಸ ಹಿ.ಪ್ರಾ.ಶಾಲೆ, ಅಂಕದ ಕಟ್ಟೆ, ಉಡುಪಿ
  • ಬಿ.ಎನ್‌.ದುಗ್ಗಪ್ಪ ಗೌಡ, ಸ.ಮಾ.ಹಿ.ಪ್ರಾ.ಶಾಲೆ, ಮೆಣಸೆ, ಚಿಕ್ಕಮಗಳೂರು
  • ಕೆ.ಪ್ರೇಮಲತಾ, ಕಸ್ತೂರ್‌ ಬಾ ಉನ್ನತ ಪ್ರಾ.ಶಾಲೆ, ಮದ್ದೂರು ,ಮಂಡ್ಯ
  • ಡಾ.ಕಲ್ಲಿನಾಥ ನೇಮಿನಾಥ ಕತ್ರಾಳೆ, ವಿದ್ಯಾರಣ್ಯ ಸಂಯುಕ್ತ ಪ.ಪೂ. ಕಾಲೇಜು, ಧಾರವಾಡ
  • ಕರಿಯಪ್ಪ ಫಕೀರಪ್ಪ ಡಾಲಾಯಿತರ್‌, ಸ.ಹಿ. ಪ್ರಾ.ಶಾಲೆ, ಕುಸುಗಲ್‌, ಹುಬ್ಬಳ್ಳಿ
  • ಚಂದ್ರಪ್ಪ ಹೊನಕೇರಪ್ಪ ಗೊಂದಿ, ಸ.ಹಿ.ಪ್ರಾ.ಶಾಲೆ, ನಂ-2 ಶಾಲೆ, ಗದಗ
  • ಗೋವಿಂದರಾಮ ನಾಯಕ್‌, ಸ.ಹಿ.ಪ್ರಾ.ಶಾಲೆ, ಅಜ್ಜಿಕಟ್ಟಾ , ಅಂಕೋಲಾ
  • ನಾಗರಾಜ ಹನುಮಂತಪ್ಪ ಹೊಸ್ಮನಿ, ಸ.ಹಿ.ಪ್ರಾ.ಶಾಲೆ, ಬೇಲೂರು ,ಬಾದಾಮಿ, ಬಾಗಲಕೋಟೆ
  • ಸಿದ್ಧಪ್ಪ ಬಸಪ್ಪ ಅಡಗಲ್ಲ, ಸ.ಹಿ.ಪ್ರಾ.ಶಾಲೆ, ಚಿಕ್ಕ ಮಚ್ಚಳ ಗುಡ್ಡ, ಬಾದಾಮಿ
  • ಗುರಪ್ಪ ಎಸ್‌. ಪಲ್ಲೇದ್‌, ಸ.ಮಾ.ಹಿ.ಪ್ರಾ. ಶಾಲೆ, ಐನೋಳ್ಳಿ, ಚಿಂಚೋಳಿ, ಗುಲ್ಬರ್ಗ
  • ಬಿ.ಅಂಬಣ್ಣ , ಸ.ಹಿ.ಪ್ರಾ.ಶಾಲೆ, ನಾಗೇನ ಹಳ್ಳಿ, ಹೊಸಪೇಟೆ
  • ಎಂ.ಜಿ. ಗೌರಮ್ಮ, ಸಿದ್ಧಗಂಗಾ ಪ್ರಾಯೋಗಿಕ ಪ್ರಾಥಮಿಕ ಶಾಲೆ, ತುಮಕೂರು
  • ಊರ್ಮಿಳಾ ಲಕ್ಷ್ಮಣ ರಾವ್‌ ಹೂಗಾರ್‌, ಡಿಪಿಇಪಿ ಕೇಂದ್ರ ಚಿಕ್ಕೋಡಿ, ಬೆಳಗಾವಿ
ಪ್ರೌಢ ಶಾಲಾ ವಿಭಾಗ

  • ಬಿ.ಆರ್‌. ದೇವಪ್ಪ , ಭಾರತಿ ಪ್ರೌಢ ಶಾಲೆ, ಕೆಳದಿ, ಸಾಗರ
  • ಡಿ.ವಸಂತ ಬಾಯಿ, ಸ. ಪ್ರೌ. ಶಾಲೆ , ಉಡುಪಿ
  • ಡಿ.ಎಂ.ಕಾವೇರಮ್ಮ , ಸ.ಪ್ರೌ.ಶಾಲೆ ನೆಲ್ಯ ಹುಡಕೇರಿ, ಕೊಡಗು
  • ವಿ. ಈಶ್ವರ ಭಟ್‌, ದೀಪಿಕಾ ಪ್ರೌಢ ಶಾಲೆ, ಮೊಡಂಕಾಪು , ಬಂಟ್ವಾಳ
  • ಟಿ.ಆರ್‌. ನಾಗಪ್ಪ ಗೌಡ, ಜಗದ್ಗುರು ರೇಣುಕಾಚಾರ್ಯ ಸ.ಪ. ಪೂ. ಕಾಲೇಜು, ಬಾಳೆ ಹೊನ್ನೂರು
  • ಕೆ.ಎ. ದೊಡ್ಮನಿ, ಸ. ಸ. ಪ. ಪೂ ಕಾಲೇಜು, ಗೋಪನ ಕೊಪ್ಪ , ಹುಬ್ಬಳ್ಳಿ
  • ಪುಟ್ಟಪ್ಪ ಬಸಣ್ಣಪ್ಪ ಮುದ್ವಿ, ಶಿಕ್ಷಣ ಸಮಿತಿ, ಮಹಾತ್ಮ ಗಾಂಧಿ ಪ್ರೌಢ ಶಾಲೆ, ದೇವಗಿರಿ, ಹಾವೇರಿ
  • ಭೀಮಣ್ಣ ತಳವಾರ, ಸ.ಪ್ರೆೃ. ಶಾಲೆ, ಗೊಬ್ಬೂರ್‌, ಅಫಜಲ್ಪುರ, ಗುಲ್ಬರ್ಗ
  • ಲಕ್ಷ್ಮಿ, ಸ.ಪ.ಪೂ. ಕಾಲೇಜು, ರಾಯಚೂರು
  • ಸಿ.ಎಸ್‌. ಬನಶಂಕರಯ್ಯ, ನ್ಯಾಷನಲ್‌ ಪ್ರೌಡ ಶಾಲೆ , ಬಸವನಗುಡಿ, ಬೆಂಗಳೂರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X