ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಹಿಳಾ ಮೀಸಲಾತಿ ಬೇಕು-ಮೋಟಮ್ಮ
ಚಿಕ್ಕಮಗಳೂರು : ಮಹಿಳೆಯರು ಸಂಘಟಿತರಾದರೆ ಅವರಿಗೆ ದೇಶವನ್ನೇ ಆಳುವ ಶಕ್ತಿ ಇದೆ ಎಂಬುದನ್ನು ಚಿಕ್ಕಮಗಳೂ-ರು ನಗ-ರ ಮಹಿಳಾ ಸಮಾಜ ತೋರಿಸಿಕೊಟ್ಟಿದೆ ಎಂದು ಸಾರಿಗೆ ಸಚಿವ ಸಗೀರ್ ಅಹ್ಮದ್ ಹೇಳಿದ್ದಾರೆ.
ಅವರು ನಗರದ ಮಹಿಳಾ ಸಮಾಜದ ಪ್ಲಾಟಿನಂ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ , ಮಹಿಳಾ ಮೀಸಲಾತಿಯಿಂದ ಮಹಿಳೆಯರು ಇನ್ನಷ್ಟು ಸಮರ್ಥವಾಗಿ ಕಾರ್ಯ ನಿರ್ವಹಿಸುವುದು ಸಾಧ್ಯ ಎಂದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾ-ಗೂ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿ-ವ ಡಿ.ಬಿ. ಚಂದ್ರೇಗೌಡ, ಶಿಕ್ಷಣ ಕ್ಷೇತ್ರದಲ್ಲಿಯೂ ಮಹಿಳೆಯ ಪಾತ್ರ ಹಿರಿದು ಎಂದರು. ಕಾರ್ಯಕ್ರಮದ ಕೊನೆಯಲ್ಲಿ ಡಾ. ರಾಜ್ ಬಿಡುಗಡೆ ಕೋರಿ, ಮತ್ತು ವೀರಪ್ಪನ್ ಬಂಧನಕ್ಕೆ ಆಗ್ರಹಿಸಿ ರಾಜ್ಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಓಂಕಾರಗೌಡ, ರಾಜ್ಯಪಾಲೆ ರಮಾ--ದೇ-ವಿ-ಯ-ವರಿಗೆ ಮನವಿ ಸಲ್ಲಿಸಿದರು.
Comments
Story first published: Tuesday, August 22, 2000, 0:00 [IST]