Get Updates
Get notified of breaking news, exclusive insights, and must-see stories!

ಸುಲ್ತಾನ್‌ ಬತ್ತೇರಿ ಬಳಿ ದೋಣಿಗಳಿಗೆ ಬೆಂಕಿ : 6 ಲಕ್ಷ ನಷ್ಟ

ನಮ್ಮ ಪ್ರತಿ-ನಿ-ಧಿ-ಯಿಂ--ದ

ಮಂಗ-ಳೂ-ರು : ಸುಲ್ತಾನ್‌ ಬತ್ತೇರಿ ಬಳಿ ನಿಲ್ಲಿಸಿದ್ದ ಯಾಂತ್ರೀಕೃತ ದೋಣಿಗಳಿಗೆ ಬೆಂಕಿ ತಗುಲಿ ಕನಿಷ್ಠ 6 ಲಕ್ಷ ರೂಪಾಯಿ ನಷ್ಟವಾಗಿರುವುದು ವರದಿಯಾಗಿದೆ.

ಭಾನುವಾರ ರಾತ್ರಿ ಎರಡು ದೋಣಿಗಳಿಗೆ ಬೆಂಕಿ ತಗುಲಿದ್ದು, ಒಂದು ದೋಣಿಯ ಯಂತ್ರೋಪಕರಣಗಳು ಮತ್ತು ಮೀನು ಹಿಡಿಯುವ ಬಲೆಗಳು ನಾಶವಾಗಿವೆ. ಅಗ್ನಿ ಶಾಮಕ ದಳದವರು ತಕ್ಷಣ ಸ್ಥಳಕ್ಕೆ ಆಗಮಿಸಿ, ಹರಡುತ್ತಿದ್ದ ಬೆಂಕಿ ನಂದಿಸಿದರು. ಮಳೆಯಿಂದ ರಕ್ಷಣೆಗಾಗಿ ದೋಣಿಗಳಿಗೆ ತೆಂಗಿನ ಗರಿ ಹೊದೆಸಲಾಗಿತ್ತು . ಶಾರ್ಟ್‌ ಸರ್ಕಿಟ್‌ನಿಂದಾಗಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮೀನುಗಾರರ ಸಂಘದ ಅಧ್ಯಕ್ಷ ವಾಸುದೇವ ಬೋಳೂರು ಭೇಟಿ ನೀಡಿದರು.

ಕಡಿಮೆ ಆದಾಯ ಇರುವವರಿಗೆ -ಸ-ರ್ಕಾರಿ ಆಸ್ಪ-ತ್ರೆ-ಯ-ಲ್ಲಿ ಉಚಿತ ಚಿಕಿತ್ಸೆ

8,000 ರೂಪಾಯಿಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಸರಕಾರಿ ಆಸ್ಪತ್ರೆಯಲ್ಲಿ ಉಚಿ-ತ ಚಿಕಿತ್ಸೆ ಪಡೆಯಲು ಅರ್ಹ-ರು ಎಂದು ಆರೋಗ್ಯ ಸಚಿವ ಡಾ. ಮಲಕರೆಡ್ಡಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತಾಡುತ್ತಿದ್ದ ಅವರು, ಕಡು ಬಡವರು 5 ರೂಪಾಯಿ ಪಾವತಿಸಿ ಒಂದು ವರ್ಷ ಮಾನ್ಯತೆ ಇರುವ ನೋಂದಾವಣೆ ಚೀಟಿಯನ್ನು ಮಾಡಿಸಿಕೊಂಡರೆ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.

ಸರಕಾರಿ ವೈದ್ಯರಿಗೆ ಸಂಬಂಧಿಸಿ ಹೊಸ ನೀತಿ ಸಂಹಿತೆಯನ್ನು ರಚಿಸಿ, ಅವರು ಕ್ಲಿನಿಕ್‌ ಮತ್ತು ಮನೆಯಲ್ಲಿ ಚಿಕಿತ್ಸೆ ನೀಡಲು ಅವಕಾಶ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+