ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯ ಮಾರಾಟ ನಿಷೇಧದಿಂದ ರಾಜ್ಯ ಸರ್ಕಾರಕ್ಕೆ12 ಕೋಟಿ ರು. ನಷ್ಟ

By Staff
|
Google Oneindia Kannada News

ಬೆಂಗಳೂರು : ರಾಜ್‌ ಅಪಹರಣದ ಕಾರಣ ಸ್ಥಗಿತಗೊಳಿಸಲಾಗಿರುವ ಮದ್ಯ ವ್ಯಾಪಾರದಿಂದ ಸರ್ಕಾರಕ್ಕೆ 12 ಕೋಟಿ ರುಪಾಯಿ ನಷ್ಟವಾಗಿದೆ.

ರಾಜ್ಯ ಅಬಕಾರಿ ಸಚಿವ ಎಂ.ಎಂ. ನಾಣಯ್ಯ ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಅಬಕಾರಿ ಇಲಾಖೆಗೆ ಆಗಿರುವ ನಷ್ಟವನ್ನು ಲೆಕ್ಕ ಹಾಕಲಾಗಿದೆ. ಇಂಥ ಸನ್ನಿವೇಶದಲ್ಲಿ ಸಾಮಾಜಿಕ ಹೊಣೆಗಾರಿಕೆ ಮುಖ್ಯವಾಗುವುದರಿಂದ ನಷ್ಟ ಅನುಭವಿಸಬೇಕಾದದ್ದು ಅನಿವಾರ್ಯ. ಈ ನಷ್ಟವನ್ನು ಭರಿಸಲು ಒಂದೇ ಬಾರಿ ಅಬಕಾರಿ ಸುಂಕ ವಸೂಲಾತಿಗೆ ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.

ಈಗ ಮದ್ಯದಂಗಡಿಗಳನ್ನು ಮುಚ್ಚಿರುವುದನ್ನೇ ನೆಪ ಮಾಡಿಕೊಂಡು ಪರವಾನಗಿ ವೆಚ್ಚದಲ್ಲಿ ಕಡಿತ ನಿರೀಕ್ಷಿಸುತ್ತಿರುವ ಮಾರಾಟಗಾರರಿಗೆ, ಸರ್ಕಾರ ಪರವಾನಗಿ ಶುಲ್ಕದಲ್ಲಿ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಒಂದೇ ಬಾರಿಗೆ ಅಬಕಾರಿ ಸುಂಕ ವಸೂಲು ಮಾಡಲು ಸಕಾರ ನಿರ್ಧರಿಸಿದ್ದು, ಇದರಿಂದ ಶೇ. 20ರಷ್ಟು ನಷ್ಟ ತುಂಬಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X