ಕರಾವಳಿಯಲ್ಲಿ ವ್ಯಾಪಕ ಮಳೆ
ಬೆಂಗಳೂರು :ಕರಾವಳಿಯ ಬಹುತೇಕ ಪ್ರದೇಶಗಳಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆ, ದಕ್ಷಿಣ ಒಳನಾಡಿನಲ್ಲಿ ದುರ್ಬಲಗೊಂಡಿದೆ. ಉತ್ತರ ಒಳನಾಡಿನ ಅನೇಕ ಪ್ರದೇಶಗಳಲ್ಲಿ ಮಳೆಯಾಗಿದೆ.
ಸುಬ್ರಹ್ಮಣ್ಯ, ಕೊಲ್ಲೂರುಗಳಲ್ಲಿ ತಲಾ 7 ಸೆಂಟಿಮೀಟರ್, ಹೊನ್ನಾವರ, ಸಿದ್ದಾಪುರಗಳಲ್ಲಿ 6, ಕುಂದಾಪುರ, ಕುಮಟಾ, ಮಂಕಿ, ಶೃಂಗೇರಿ, ತಾಳಗುಪ್ಪಗಳಲ್ಲಿ ತಲಾ 5 ಸೆಂಟಿ ಮೀಟರ್ ಮಳೆಯಾಗಿದೆ. ಬೆಳ್ತಂಗಡಿ, ಧರ್ಮಸ್ಥಳ, ಅಂಕೋಲಾಗಳಲ್ಲಿ 4 ಸೆಂಟಿ ಮೀಟರ್, ಕಾರ್ಕಳ, ಕೋಟಾ, ಉಡುಪಿ, ಬಾಗಮಂಡಲಗಳಲ್ಲಿ 3 ಸೆಂಟಿ ಮೀಟರ್, ಗೋಕರ್ಣ, ಬನವಾಸಿ, ಹಳಿಯಾಳ, ಶಿರಸಿ, ಬಂಟ್ವಾಳ, ಪುತ್ತೂರು, ಮೂಡಬಿದರೆ, ಶಿರಾಲಿ, ಲೋಂಡಾ, ಅಫ್ಜಲ್ಪುರ, ಮುನಿರಾಬಾದ್, ಸಿಂಧನೂರ್, ದೊಡ್ಡಬಳ್ಳಾಪುರ, ರಾಮನಗರ, ಸೋಮವಾರಪೇಟೆ, ಕಳಸಗಳಲ್ಲಿ ತಲಾ 2 ಸೆಂಟೀಮೀಟರ್ ಮಳೆ ಬಿದ್ದಿದೆ.
ಸೋಮವಾರದ ಬೆಳಗಿನವರೆಗಿನ ಹವಾ ಮನ್ಸೂಚನೆಯಂತೆ ಕರಾವಳಿಯ ಬಹುತೇಕ ಸ್ಥಳಗಳು ಮತ್ತು ಉತ್ತರ ಒಳನಾಡಿನ ಅನೇಕ ಸ್ಥಳಗಳಲ್ಲಿ ಹಾಗೂ ಒಳನಾಡಿನ ಕೆಲವು ಪ್ರದೇಶಗಶಲ್ಲಿ ಗುಡುಗಿನಿಂದ ಕೂಡಿದ ಸುರಿ ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಇಲ್ಲವೇ ಭಾರಿ ಮಳೆ ಬೀಳಲಿದ್ದು, ಉತ್ತರ ಒಳನಾಡಿನ ಅನೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.