ರಾಜ್ ಇಲ್ಲದ ರಾಜ್ಯದಲ್ಲಿ ನಷ್ಟ ಎಷ್ಟು?
ಬೆಂಗಳೂರು : ರಾಜ್ ಅಪಹರಣದಿಂದ ರಾಜ್ಯದ ವಿತ್ತ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ತಿಳಿಸಿದ್ದಾರೆ. ಚೌಡಯ್ಯ ಸ್ಮಾರಕ ಭವನದಲ್ಲಿ ಶುಕ್ರವಾರ ಸಾರ್ಕ್ ದೇಶಗಳ ಉದ್ಯಮಪತಿಗಳ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ರಾಜ್ ಅಪಹರಣದಿಂದ ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ತಾತ್ಕಾಲಿಕ ಏರುಪೇರುಗಳಾಗಿವೆ ಅಷ್ಟೇ ಎಂದೂ ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ ಯಾವುದೇ ಮುಖ್ಯಮಂತ್ರಿ ಸಹಜವಾಗಿ ನೀಡುವ ಹೇಳಿಕೆ ಇದೇ ಎಂಬುದರಲ್ಲಿ ಅನುಮಾನವೇ ಇಲ್ಲ.
ರಾಜ್ಯದ ಅರ್ಥ ವ್ಯವಸ್ಥೆಯ ಮೇಲೆ ರಾಜ್ ಅಪಹರಣ ಯಾವುದೇ ಪರಿಣಾಮ ಬೀರಿಲ್ಲ ಎಂದು ಕೃಷ್ಣ ಹೇಳಿರುವುದನ್ನು ನೀವು ಅನುಮೋದಿಸುತ್ತೀರೇನು?
ಲೆಕ್ಕ ಇಟ್ಟವರಿಲ್ಲ : ಒಂದಂತೂ ಸತ್ಯ. ರಾಜ್ ಅಪಹರಣದ ಮೊದಲ ಮೂರು - ನಾಲ್ಕು ದಿನಗಳಂತೂ ರಾಜ್ಯದ ಜನಜೀವನವೇ ಬಹುತೇಕ ಸ್ತಬ್ಧವಾಗಿತ್ತು. ಬೆಂಗಳೂರೂ ಸೇರಿದಂತೆ, ರಾಜ್ಯದ ಹಲವು ಪ್ರಮುಖ ನಗರ - ಪಟ್ಟಣಗಳಲ್ಲಿ ಅಘೋಷಿತ ಬಂದ್ ಆಚರಿಸಲಾಯಿತು. ಸುಮಾರು 15 ದಿನಗಳ ಕಾಲ ಶಾಲೆ - ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ರಾಜ್ಕುಮಾರ್ ಬಿಡುಗಡೆಯ ಪ್ರಯತ್ನಕ್ಕೆ ಪೂರಕವಾದ ಉನ್ನತ ಮಟ್ಟದ ಸಭೆಗಳ ವಿನಾ ಮತ್ತಾವುದೇ ಅಧಿಕೃತ ಸರಕಾರಿ ಕಾರ್ಯಕ್ರಮಗಳು - ಕಲಾಪಗಳು ನಡೆಯಲಿಲ್ಲ.
ರಾಜ್ ಅಪಹರಣಾನಂತರದ ಮೊದಲ ಐದು ದಿನಗಳ ಕಾಲ ಹೊರ ರಾಜ್ಯಗಳಿಂದ ಅದರಲ್ಲೂ ತಮಿಳುನಾಡಿನಿಂದ ಯಾವುದೇ ಸಾರಿಗೆ ಅಥವಾ ಸರಕು ಸಾಗಣೆ ವಾಹನಗಳು ರಾಜ್ಯವನ್ನು ಪ್ರವೇಶಿಸಲಿಲ್ಲ. ವಾಣಿಜ್ಯ ವಹಿವಾಟು ವದಂತಿಗಳ ಮೇಲಾಟಕ್ಕೆ ಮುಗ್ಗರಿಸಿತು.
ಚಿತ್ರೋದ್ಯಮ ಇನ್ನೂ ಬಂದ್ : ಚಲನಚಿತ್ರೋದ್ಯಮವಂತೂ ಕಳೆದ 20 ದಿನಗಳಿಂದ ಸ್ತಬ್ಧವಾಗಿದೆ. ಚಲನಚಿತ್ರ ಕಾರ್ಮಿಕರು, ಕಲಾವಿದರು, ಕಿರುತೆರೆಯ ಕಾರ್ಮಿಕರು, ಕಲಾವಿದರು ನಿರುದ್ಯೋಗಿಗಳಾಗಿದ್ದಾರೆ. 20 ದಿನದಿಂದಲೂ ಕೆಲಸವಿಲ್ಲದೆ ಊಟಕ್ಕೂ ಕೆಲವರು ಪರದಾಡುತ್ತಿದ್ದಾರೆ. ಚಿತ್ರೋದ್ಯಮದಲ್ಲಿ ಹಣಕಾಸಿನ ವಹಿವಾಟು ಸ್ತಬ್ಧವಾಗಿದೆ. ಬಡ್ಡಿಗೆ ಹಣತಂದು ಚಿತ್ರ ಮಾಡುವ ಮಂದಿಯ ಬಡ್ಡಿ ಏರುತ್ತಿದೆಯೇ ವಿನಾ ಯಾವುದೇ ಬೆಳವಣಿಗೆ ಆಗಿಲ್ಲ.
ರಾಜ್ಕುಮಾರ್ ಸುರಕ್ಷಿತವಾಗಿ ಹಿಂತಿರುಗುವವರೆಗೆ ಚಿತ್ರೋದ್ಯಮದಲ್ಲಿ ಯಾವುದೇ ವರ್ಗದ ಕೆಲಸ ನಡೆಯುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಒಂದು ಅಂದಾಜಿನ ರೀತ್ಯ ದಿನನಿತ್ಯ ಕನ್ನಡ ಚಿತ್ರೋದ್ಯಮಕ್ಕೆ ಮೂರೂವರೆ ಕೋಟಿ ರುಪಾಯಿ ನಷ್ಟ ಸಂಭವಿಸುತ್ತಿದೆ. ಅಂದರೆ ಈ 20 ದಿನಗಳಲ್ಲಿ ಹತ್ತಿರ ಹತ್ತಿರ 250 ಕೋಟಿ ನಷ್ಟ ಉಂಟಾಗಿದೆ. ಈ ನಷ್ಟ ತುಂಬಿಕೊಳ್ಳಲು ಚಿತ್ರೋದ್ಯಮಕ್ಕೆ ಕನಿಷ್ಠ ಇನ್ನು ಒಂದು ವರ್ಷವಾದರೂ ಬೇಕು. ಇನ್ನು ಶಾಲೆ - ಕಾಲೇಜುಗಳ ರಜೆ, ಕಚೇರಿಗಳಲ್ಲಿ ವದಂತಿಗೆ ಹೆದರಿ ಸಹಿ ಹಾಕಿ ಮನೆಗೆ ಮರಳಿದವರ ಸಂಖ್ಯೆ, ಬಂದ್ನಿಂದ ನಿಂತ ವಹಿವಾಟು, ವ್ಯರ್ಥವಾದ ಮಾನವ ಶಕ್ತಿ ಮುಂತಾದುವನ್ನು ಲೆಕ್ಕ ಹಾಕಿದರೆ, ರಾಜ್ಯ ಹತ್ತಿರ ಹತ್ತಿರ 1000 ಕೋಟಿ ರುಪಾಯಿಗೂ ಹೆಚ್ಚು ನಷ್ಟ ಅನುಭವಿಸಿದೆ ಎನ್ನಲಾಗುತ್ತಿದೆ. ಇದರಲ್ಲಿ ಪರೋಕ್ಷ ಹಾಗೂ ಪ್ರತ್ಯಕ್ಷ ನಷ್ಟಗಳು ಸೇರುತ್ತವೆ. ಆರ್ಥಿಕ ತಜ್ಞರು ಲೆಕ್ಕಹಾಕಿದರೆ ನಿಖರವಾದ ಮಾಹಿತಿ ದೊರೆತೀತು. ನೀವೇನಂತೀರಿ?
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications