ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಂಪ್ಕೋ ನಿರ್ದೇಶಕ ಪ್ರಮೋದ್‌ ಕುಮಾರ್‌ ರೈ ಅಧಿಕಾರ ತ್ಯಾಗ

By Staff
|
Google Oneindia Kannada News

ಮಂಗಳೂರು :ತಮಗೆ ಐಎಎಸ್‌ ದರ್ಜೆ ನಿರಾಕರಿಸಿದ್ದನ್ನು ಪ್ರತಿಭಟಿಸಿ ರಾಜ್ಯ ಆಡಳಿತ ಸೇವೆಯ ಹಿರಿಯ ಅಧಿಕಾರಿ ಹಾಗೂ ಕ್ಯಾಂಪ್ಕೋ ಆಡಳಿತ ನಿರ್ದೇಶಕ ಪ್ರಮೋದ್‌ ಕುಮಾರ್‌ ರೈ ಆಗಸ್ಟ್‌ 16ರಂದು ಅಧಿಕಾರ ತ್ಯಾಗ ಮಾಡಿದ್ದಾರೆ.

ತಮಗೆ ಐಎಎಸ್‌ ದರ್ಜೆಗೆ ಬಡ್ತಿ ಸಿಗದೇ ಇರುವುದನ್ನು ಪ್ರಶ್ನಿಸಿ ಕೆಲ ಸಮಯದ ಹಿಂದೆ ಅವರು ಸರಕಾರಕ್ಕೆ ಪತ್ರ ಬರೆದಿದ್ದರು. ಕಳೆದ ಐದು ವರ್ಷಗಳಿಂದ ರೈ ಅವರು ಕ್ಯಾಂಪ್ಕೋ ಆಡಳಿತ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದು ಅವರ ಆಡಳಿತ ಅವಧಿಯಲ್ಲಿ ಕ್ಯಾಂಪ್ಕೋ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿತ್ತು . ಕಳೆದ ಒಂದು ದಶಕದಿಂದ ರೈ ಅವರ ಹೆಸರು ಐಎಎಸ್‌ ದರ್ಜೆಗೆ ಬಡ್ತಿ ಪಡೆಯುವವರ ಪಟ್ಟಿಯಲ್ಲಿತ್ತು. ಆದರೆ ಪ್ರತಿಬಾರಿಯೂ ಬಡ್ತಿ ದೊರೆಯದೆ ತಮಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X