ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈತರು ಮುಂದಾದಲ್ಲಿ ನೂರು ಶೈತ್ಯಾಗಾರ ತೆರೆಯಲು ಸರ್ಕಾ-ರ ಸಿದ್ಧ
ತುಮಕೂರು : ಕೃಷಿ ಉತ್ಪನ್ನಗಳನ್ನು ಸುರಕ್ಷಿತವಾಗಿಡಲು ರಾಜ್ಯದಲ್ಲಿ 100 ಶೈತ್ಯಾಗಾರಗಳನ್ನು ತೆರೆಯಲು ಸರಕಾರ ಉದ್ದೇಶಿಸಿದ್ದು, ಶೈತ್ಯಾಗಾರ ಸ್ಥಾಪನೆಗೆ ರೈತ ಸಂಘಟನೆಗಳು ಮುಂದೆ ಬರಬೇಕು ಎಂದು ರಾಜ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ರೈತರು ಸಂಘಟನೆಗಳನ್ನು ರಚಿಸಿಕೊಂಡು ಮುಂದೆ ಬಂದಲ್ಲಿ ಆರ್ಥಿಕವಾಗಿ ಸಹಕರಿಸಲು ಸರಕಾರ ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಮುಂದೆ ಬರಬೇಕು ಎಂದು ನಗರದಲ್ಲಿ ಬುಧವಾರ ಏರ್ಪಡಿಸಿದ್ದ ತೋಟಗಾರಿಕಾ ಸಪ್ತಾಹದ-ಲ್ಲಿ ಮಾತ-ನಾ-ಡು-ತ್ತಿ-ದ್ದ ಜಯ-ಚಂ-ದ್ರ ಹೇಳಿದರು. ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ ಮಾತನಾಡಿ, ಒಣ ಪ್ರದೇಶವಾದ ಕೋಲಾರದಲ್ಲಿ ವಾಣಿಜ್ಯ ಬೆಳೆಗಳನ್ನು ಸಾಕಷ್ಟು ಬೆಳೆಯುತ್ತಾರೆ. ತುಮಕೂರು ಜಿಲ್ಲೆಯಲ್ಲಿಯೂ ವಾಣಿಜ್ಯ ಬೆಳೆ ಬೆಳೆಯಲು ಸಾಕಷ್ಟು ಉತ್ತಮ ಹವಾಗುಣವಿದೆ, ರೈತರು ಮುಂದೆ ಬರಬೇಕಷ್ಟೆ ಎಂದರು.
Story first published: Monday, July 31, 2000, 5:30 [IST]