ರಾಜ್ಯದ ಹತ್ತು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
ಬೆಂಗಳೂರು : ಸ್ವಾತಂತ್ರ ದಿನಾಚರಣೆ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಪದಕದ ಗೌರವಕ್ಕೆ ರಾಜ್ಯದ ಹತ್ತು ಪೊಲೀಸ್ ಅಧಿಕಾರಿಗಳು ಪಾತ್ರರಾಗಿದ್ದಾರೆ.
ವಿಜಯ ಸಾಸನೂರ್ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ವಿಶಿಷ್ಟ ಸೇವಾ ಪದಕ ಲಭಿಸಿದ್ದು, ಇತರ ಒಂಬತ್ತು ಮಂದಿ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಸಿಜಿಡಿಯ ಡಿಐಜಿಪಿ ಆಗಿರುವ ಬಿ. ಐ. ಜ್ಯೋತಿಪ್ರಕಾಶ್, ಟಿ. ಜಯಪ್ರಕಾಶ್ (ಡಿಐಐಪಿ ಗುಪ್ತದಳ), ನಿವೃತ್ತ ಡಿವೈ ಎಸ್ಪಿ ನಾಗರಾಜಯ್ಯ ಎಚ್.ಪಿ, ಬೆಳಗಾವಿ ಜಿಲ್ಲೆ ಗೋಕಾಕ ಉಪವಿಭಾಗದ ಡಿವೈ ಎಸ್ಪಿ ಮುಲ್ಲಾ ಕೆ.ಬಿ, ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಬ್ದುಲ್ ಅಜೀಮ್, ಸಿಓಡಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುಳಾ ದೇವರಾಜ್, ಬೆಳಗಾವಿಯ ಖಡೇಬಾ ಜಾರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿ. ಐ. ಕ್ಯಾತನ್, ದಕ್ಷಿಣ ಕನ್ನಡದ ಬರ್ಕೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ.ಸಿ. ಅಂೋಕನ್, ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯ ಮುಖ್ಯ ಪೇದೆ ಬಿ. ರಾಜೇಗೌಡ ಅವರು ಪದಕ ಪಡೆದಿರುವ ಅಧಿಕಾರಿಗಳಾಗಿದ್ದಾರೆ.