ನಾ-ವು ಕ್ಷೇಮ-ವಾ-ಗಿ-ದ್ದೇ-ವೆ: -ಚೆ-ನ್ನೈ-ಗೆ ರಾಜ್ ಕುಟುಂ-ಬ-ದ ಯೋಗ-ಕ್ಷೇ-ಮ-ದ ಕ್ಯಾಸೆ-ಟ್
ಬೆಂಗಳೂರು : ರಾಜ್ ಕುಟುಂ-ಬ-ದ-ವ-ರ ಯೋಗ-ಕ್ಷೇ-ಮ-ವ-ನ್ನು ಹೊ-ತ್ತ ಕ್ಯಾಸೆ-ಟ್ ಹಾಗೂ ವೀರಪ್ಪನ್ನ ಬೇಡಿಕೆಗಳ ಕುರಿತು ರಾಜ್ಯ ಸರ್ಕಾ-ರ-ದ ಪ್ರತಿ-ಕ್ರಿ-ಯೆ ಇಂದು (ಆಗ-ಸ್ಟ್ 14) ಚೆನ್ನೈ ತಲು-ಪ-ಲಿ-ದೆ.
ವೀರ-ಪ್ಪ-ನ್ ಬೇಡಿ-ಕೆ-ಗ-ಳಿ-ಗೆ ರಾ-ಜ್ಯ-ದ ಪ್ರತಿ-ಕ್ರಿ-ಯೆ- ಅಭಿ-ಪ್ರಾ-ಯಕ್ಕೆ ಸಂಬಂಧಿಸಿದ ಕಾಗದ ಪತ್ರಗಳ ನಕಲು -ಪ್ರ-ತಿ-ಗ-ಳೊಂ-ದಿ-ಗೆ ನಕ್ಕೀ-ರ-ನ್ ಗೋಪಾ-ಲ್ ರಾಜ್ ಅಪ-ಹ-ರ-ಣ ಸಂಬಂ-ಧ ಬುಧ-ವಾ-ರ ತಮ್ಮ ಎರ-ಡ-ನೇ ಕಂತಿನ ಅರ-ಣ್ಯ ಯಾನಕ್ಕೆ ತೆರ-ಳಲಿ-ದ್ದಾ-ರೆ.
ಗೋಪಾಲ್ ಮೂಲಕ ವೀರ-ಪ್ಪನ್ ಕಳುಹಿಸಿರುವ ಹೊಸ ಬೇಡಿಕೆಗಳನ್ನು ಪರಿಶೀಲಿಸಿರುವ ರಾಜ್ಯ ಸರಕಾರ ತಾನು ಕೈಗೊಂಡಿರುವ ಕ್ರಮಗಳ ಬಗೆಗಿನ ವಿವರಣೆಯಿರುವ ಕಾಗದ ಪತ್ರಗಳನ್ನು ಭಾನುವಾರ ಸಿದ್ಧಪಡಿಸಿದೆ. ಈ ಕಾಗದ ಪತ್ರಗಳನ್ನು ಹಿರಿಯ ಪೊಲೀಸ್ ಅಧಿಕಾರಿ ಕೆ.ಆರ್. ಶ್ರೀನಿವಾಸನ್ ಸೋಮವಾರ ಚೆನ್ನೈಗೆ ಕೊಂಡೊಯ್ಯಲಿದ್ದಾರೆ.
ವೀರಪ್ಪನ್ನ ಹೊಸ ಬೇಡಿಕೆಗಳ ಬಗ್ಗೆ ತಮಿಳು ನಾಡು ಸರಕಾರದ ಜೊತೆ ಚರ್ಚಿಸುವುದಕ್ಕಾಗಿ ಚೆನ್ನೈಗೆ ತೆರಳಿದ್ದ ರಾಜ್ಯ ಗೃಹ ಕಾರ್ಯದರ್ಶಿ ಎಂ.ಬಿ. ಪ್ರಕಾಶ್ ಅವರೊಡನೆ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಮಾತುಕತೆ ನಡೆಸಿದ ಬಳಿಕ ರಾಜ್ಯ-ದ ನಿಲುವುಗಳ ಕುರಿತ ಕಾಗದ ಪತ್ರಗಳು ಚೆನ್ನೈ-ಗೆ ರವಾ-ನೆ-ಯಾ-ಗ-ಲಿ-ವೆ.
ಇದರ ಜೊತೆಗೆ ವೀರಪ್ಪನ್ನ ಬೇಡಿಕೆಗಳನ್ನು ಈಡೇರಿಸಲು ಅಡ್ಡಿಯಾಗಿರುವ ಕಾನೂನು ತೊಡಕುಗಳ ಕುರಿತು ವಿವರಿಸುವ ಆಡಿಯೋ ಕ್ಯಾಸೆಟ್ಟನ್ನೂ ವೀರ-ಪ್ಪ-ನ್-ಗೆ ಕಳು-ಹಿ-ಸ-ಲಾ-ಗು-ವು-ದು. ಕರ್ನಾಟಕ ಮತ್ತು ತಮಿಳುನಾಡು ಸರಕಾರದ ಪ್ರತಿಕ್ರಿಯೆಗಳನ್ನು ಹೊತ್ತು ನಕ್ಕೀರನ್ ಗೋಪಾಲ್ ಬುಧವಾರ ಮತ್ತೆ ವೀರಪ್ಪನ್ ಅಡಗುದಾಣಕ್ಕೆ ತೆರಳಲಿದ್ದಾರೆ.