ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಚಿವರಿಬ್ಬರ ವಿರುದ್ಧ ಜಾಮೀನು ರಹಿತ ವಾರೆಂಟ್
ಬಳ್ಳಾರಿ: ರೈಲು ರೋಕೊ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟಗಾರಿಕಾ ಸಚಿವ ಅಲ್ಲಂ ವೀರಭದ್ರಪ್ಪ, ಪಂಚಾಯತ್ ರಾಜ್ ಖಾತೆಯ ರಾಜ್ಯ ಸಚಿವ ಎಂ. ದಿವಾಕರಬಾಬು, ಸಂಸದ ಕೆ. ಸಿ. ಕೊಂಡಯ್ಯ ಹಾಗೂ ಶಾಸಕ ಶಿರಾಜ್ ಶೇಖ್ ಸೇರಿದಂತೆ ಹಲವು ಆರೋಪಿಗಳ ವಿರುದ್ಧ ಜಿಲ್ಲಾ ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಹೊರಡಿಸಿದೆ.
ಆರೋಪಿಗಳು 1998ರಲ್ಲಿ ಕೊಟ್ಟೂರು, ಹರಿಹರ ರೈಲ್ವೇ ಯೋಜನೆ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ರೈಲು ರೋಕೊ ಚಳವಳಿ ನಡೆಸಿದ್ದರು. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಂಡೂರು ಕೋರ್ಟಿಗೆ ಹಾಜರಾಗಲು ಆರೋಪಿಗಳು ವಿಫಲರಾದ ಹಿನ್ನಲೆಯಲ್ಲಿ ಜಿಲ್ಲಾ ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಹೊರಡಿಸಿದೆ.
Comments
Story first published: Monday, August 14, 2000, 0:00 [IST]