ಕೊಡಗಿಗೆ ಮತ್ತೆ ಪ್ರತ್ಯೇಕ ರಾಜ್ಯದ ಸ್ಥಾನ ಮಾನ ಬೇಕು - ನುಚ್ಚಪ್ಪ
ನವದೆಹಲಿ : ಹಿಂದೆ ಪ್ರತ್ಯೇಕ ರಾಜ್ಯವಾಗಿದ್ದು , ಈಗ ಕರ್ನಾಟಕದ ಶ್ರೀಮಂತ ಜಿಲ್ಲೆಯಾಗಿರುವ ಕೊಡಗನ್ನು ಮತ್ತೆ ಪ್ರತ್ಯೇಕ ರಾಜ್ಯವಾಗಿ ಘೋಷಿಸಬೇಕೆಂದು ಕೂರ್ಗ್ ನ್ಯಾಷನಲ್ ಕೌನ್ಸಿಲ್ನ ಮುಖ್ಯ ಕಾರ್ಯದರ್ಶಿ ಎನ್.ಯು. ನುಚ್ಚಪ್ಪ ಶನಿವಾರ ಹೇಳಿದ್ದಾರೆ.
1952ರಿಂದ 1956ರವರೆಗೆ ಕೊಡಗನ್ನು ಒಂದು ರಾಜ್ಯವಾಗಿ ಪರಿಗಣಿಸಲಾಗಿತ್ತು. 25 ಮಂದಿ ಸದಸ್ಯರ ವಿಧಾನ ಸಭೆ, ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳನ್ನೊಳಗೊಂಡ ಪ್ರತ್ಯೇಕ ಸರಕಾರವೂ ಕೊಡಗಿನಲ್ಲಿತ್ತು. ದೇಶದಲ್ಲಿಯೇ ಉತ್ತಮ ಗುಣಮಟ್ಟದ ಕಾಫಿ ಬೆಳೆಯುವ ಮೂಲಕ, ದೇಶದ ಒಟ್ಟು ಉತ್ಕೃಷ್ಟ ಕಾಫಿಯ ಶೇ 40ರಷ್ಟನ್ನು ಈಗಿನ ಕೊಡಗು ಜಿಲ್ಲೆ ಉತ್ಪಾದಿಸುತ್ತಿದೆ. ವರ್ಷಕ್ಕೆ 1, 700 ಕೋಟಿ ರೂಪಾಯಿ ವಿದೇಶೀ ವಿನಿಮಯ ಗಳಿಸುತ್ತಿದೆ. ದೇಶದ ರಕ್ಷಣಾ ಪಡೆಗೂ ಕೊಡಗು, ವೀರರನ್ನು ಹೆತ್ತು ಕೊಟ್ಟಿರುವುದನ್ನು ಮರೆಯುವಂತಿಲ್ಲ. ಆ-ದ-ರೂ ಸರಕಾರ ರಾಜಕೀಯವಾಗಿ ಕೊಡಗಿನ ಬಗ್ಗೆ ಸಾಕಷ್ಟು ಗಮನ ಹರಿಸುತ್ತಿಲ್ಲ ಎಂದು ನುಚ್ಚಪ್ಪ ಆಪಾದಿಸಿದರು.
ಕೊಡಗು ಲೋಕಸಭಾ ಕ್ಷೇತ್ರವನ್ನು ಮಂಗಳೂರು ಲೋಕ-ಸ-ಭಾ ಕ್ಷೇತ್ರದೊಂದಿಗೆ ಸೇರಿಸಲಾಗಿದೆ. ಇದರಿಂದ ಕ್ಷೇತ್ರ ವಿಂಗಡನೆಯಲ್ಲಿ ಕೊಡಗಿಗೆ ಅನ್ಯಾಯವಾಗಿದೆ ಎಂದರು.
ರಾಜ್ಯ ಸರಕಾರ ನರಹಂತಕ ವೀರಪ್ಪನ್ನ ಬೇಡಿಕೆಗಳಿಗೆ ಶರಣಾಗುತ್ತಿದೆ. ಕೇಂದ್ರ ಸರಕಾರ ಹಿಜಬುಲ್ ಮುಜಾಹಿದ್ದೀನ್ನ ಮುಖಂಡರೊಡನೆ ಮಾತುಕತೆ ನಡೆಸಲು ಮುಂದಾಗಿದೆ. ಈ ಎರಡೂ ಪ್ರಕ್ರಿಯೆಗಳು ಸರಕಾರಗಳೆರಡೂ ಹಿಂಸೆಗೆ ತಲೆಬಾಗುವುದನ್ನು ತೋರಿಸುತ್ತವೆ ಎಂದ ನುಚ್ಚಪ್ಪ , ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ರಾಷ್ಟ್ರಪತಿ, ಪ್ರಧಾನಿ, ಸಂವಿಧಾನ ಪರಾಮರ್ಶನಾ ಸಮಿತಿಯ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎಂ. ವೆಂಕಟಾಚಲಯ್ಯ ಹಾಗೂ ಗೃಹ ಸಚಿವರ ಮುಂದಿಟ್ಟಿರುವುದಾಗಿ ಹೇಳಿದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications