ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಂತ್ರಜ್ಞಾನದ ಜತೆ ಆತ್ಮಜ್ಞಾನ ವೃದ್ಧಿಗೆ ಕರೆ
ಯಚೂರು :ಇದು ಆಧುನಿಕ ಯುಗ, ಮಾಹಿತಿ ತಂತ್ರಜ್ಞಾನ ಭರದಿಂದ ಬೆಳೆಯುತ್ತಿದೆ. ದೇಶದ ಪ್ರಗತಿಯ ದೃಷ್ಟಿಯಿಂದ ನಾವೆಲ್ಲ ವಿಜ್ಞಾನ ತಂತ್ರಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಇದರ ಜತೆಗೆ ಆತ್ಮಜ್ಞಾನವನ್ನು ಸಹ ವೃದ್ಧಿಸಿಕೊಳ್ಳುವುದನ್ನು ಮರೆಯ ಬಾರದು ಎಂದು ಚಿತ್ರದುರ್ಗ ಮುರುಘರಾಜೇಂದ್ರ ಮಠದ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಕರೆ ನೀಡಿದ್ದಾರೆ.
ವೀರಶೈವ ಸಮಾಜ ಮತ್ತು ಬಸವ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶರಣ ಸಂಸ್ಕೃತಿ ಉತ್ಸವದ ಸಾನಿಧ್ಯ ವಹಿಸಿದ್ದ ಸ್ವಾಮಿಗಳು ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೂಡ ಧರ್ಮಾದರ್ಶಗಳನ್ನು ಮರೆಯಬಾರದು ಎಂದರು.
ಸಂಸ್ಕೃತಿ ಉತ್ಸವದಲ್ಲಿ ಸೋಮವಾರಪೇಟೆ ಹಿರೇಮಠದ ಸ್ವಾಮೀಜಿಗಳು, ಕೊಲ್ಲಾಪುರದ ಚಂದ್ರಶೇಖರ ಸ್ವಾಮೀಜಿ, ಸಿದ್ದರಾಮ ಸ್ವಾಮೀಜಿ ಹಾಗೂ ಮಾಜಿ ಸಚಿವರು ಹಾಗೂ ಅನೇಕ ಗಣ್ಯರು ಪಾಲ್ಗೊಂಡಿದ್ದರು.
Comments
English summary
sharana samskruti utsav in raichur