ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೋಪಾಲ್ ಇನ್ನೂ ಚೆನ್ನೈಗೆ ಬಂದಿಲ್ಲ, ಶನಿವಾರ ರಾತ್ರಿ ಮರಳುವ ನಿರೀಕ್ಷೆ
ಚೆನ್ನೈ : ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ವೀರಪ್ಪನ್ ಜೊತೆ ಸಂಧಾನಕ್ಕಾಗಿ ಕಳಿಸಿರುವ ನಕ್ಕೀರನ್ ಸಂಪಾದಕ ಆರ್.ಆರ್. ಗೋಪಾಲ್ ಶನಿವಾರ ರಾತ್ರಿ ಚೆನ್ನೈಗೆ ಮರಳುವ ನಿರೀಕ್ಷೆಯಿದೆ ಎಂದು ತಮಿಳುನಾಡಿನ ಪೊಲೀಸ್ ಮಹಾ ನಿರ್ದೇಶಕ ಎಫ್. ಸಿ. ಶರ್ಮ ತಿಳಿಸಿದ್ದಾರೆ.
ಗೋಪಾಲ್ ಈಗಾಗಲೇ ಚೆನ್ನೈಗೆ ಮರಳಿದ್ದಾರೆ ಎನ್ನುವ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಶರ್ಮ ಈ ಸ್ಪಷ್ಟನೆ ನೀಡಿದ್ದಾರೆ. ವೀರಪ್ಪನ್ ಈಗಾಗಲೇ ತನ್ನ ಬೇಡಿಕೆಗಳಿರುವ ಕ್ಯಾಸೆಟ್ಟೊಂದನ್ನು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ತಲುಪಿಸಿದ್ದಾನೆ ಎನ್ನುವ ಸುದ್ದಿ ಅಲ್ಲಲ್ಲಿ ಕೇಳಿಬರುತ್ತಿದೆ. ಇದಕ್ಕೆ ಸ್ಪಷ್ಟೀಕರಣ ನೀಡಲು ಎಫ್. ಸಿ. ಶರ್ಮ ನಿರಾಕರಿಸಿದ್ದಾರೆ. ಚೆನ್ನೈನಲ್ಲಿರುವ ರಾಜ್ ಪುತ್ರ ಶಿವರಾಜ್ಕುಮಾರ್ ಸಹ ವೀರಪ್ಪನ್ ಬೇಡಿಕೆಯ ಕ್ಯಾಸೆಟ್ ತಲುಪಿರುವ ಬಗೆಗೆ ತಮ್ಮ ಕುಟುಂಬಕ್ಕೆ ಇದುವರೆವಿಗೂ ಯಾವುದೇ ಮಾಹಿತಿ ಕೊಟ್ಟಿಲ್ಲ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
Comments
English summary
Gopal likely to reach Chennai today