ಕುಂತಲ್ಲೇ ಕುಲದೇವತೆಗೆ ಈ- ಮೇಯ್ಲ್ನಲ್ಲಿ ಕುಂಕುಮಾರ್ಚನೆ
ದೇವಸ್ಥಾನಕ್ಕೆ ಹೋಗಲು ಪುರುಸೊತ್ತಿಲ್ಲದ ಆಸ್ತಿಕರಿಗೆ ಆಧುನಿಕ ತಂತ್ರಜ್ಞಾನ ಸೃಷ್ಟಿಸಿದ ದೈವಾನುಕೂಲವಿದು
ಕಾಶಿ ವಿಶ್ವನಾಥ, ಕಂಚಿ ಕಾಮಾಕ್ಷಿ, ಮಧುರೆ ಮೀನಾಕ್ಷಿ, ತಿರುಪತಿ ತಿಮ್ಮಪ್ಪ , ಪುರಿ ಜಗನ್ನಾಥ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಧರ್ಮಸ್ಥಳದ ಮಂಜುನಾಥ ಮುಂತಾದ ದೇವಾನುದೇವತೆಗಳಿಗೆ ಮನೆಯಲ್ಲಿ ಕೂತೇ ಪೂಜೆ ಸಲ್ಲಿಸಬಹುದು, ಇಂಟರನೆಟ್ ಮೂಲಕ. ಇದೋ ಬಂದಿದೆ ಈ ಪ್ರಾರ್ಥನ.ಕಾಂ , ಇದರ ಮೂಲಕ ಭಾರತದ 420 ದೇವಾಲಯಗಳಿಗೆ ಪೂಜೆ ಸಲ್ಲಿಸಬಹುದು. ಗಣೇಶ, ಸುಬ್ರಹ್ಮಣ್ಯ, ಈಶ್ವರ, ಶ್ರೀಕೃಷ್ಣ , ಲಕ್ಷ್ಮಿ, ವೆಂಕಟೇಶ್ವರ, ಶಾರದೆ ಹೀಗೆ ಅಸಂಖ್ಯ ದೇವರುಗಳಿಗೆ ನಿಮ್ಮ ಪ್ರಾರ್ಥನೆ ಸಲ್ಲಿಸಬಹುದು. ಮನಿ ಆರ್ಡರ್ ಮಾಡುವ ತಾಪತ್ರಯ ಇಲ್ಲ. ಒಮ್ಮೆ ನಿಮ್ಮ ಕಂಪ್ಯೂಟರಿನ ಡೆಸ್ಕ್ಟಾಪಿಗೆ ಸೈಟಿನ ಐಕಾನನ್ನು ಡೌನ್ಲೋಡ್ ಮಾಡಿಕೊಂಡರಾಯಿತು. ನೀವು ನಿಮ್ಮ ದೇವರನ್ನು ಮಿಸ್ ಮಾಡಿಕೊಳ್ಳುವುದು ತಪ್ಪುತ್ತದೆ. ದೇವರ ದರ್ಶನ ಮಾಡದೆ ಪೂಜೆ ಸಲ್ಲಿಸಿ ಪ್ರಯೋಜನವೇನು ಎಂದಿರಾ? ಚಿಂತಿಸಬೇಡಿ, ಈ ಸೈಟಿನಲ್ಲಿ 2000ಕ್ಕೂ ಮಿಕ್ಕ ಫೋಟೋಗಳಿವೆ. ಗಣೇಶನದೇ 220 ಫೋಟೋಗಳಿವೆ. ಬರೇ ದೇವಾನುದೇವತೆಗಳಷ್ಟೇ ಅಲ್ಲ , ದೇವಾಲಯಗಳ ಚಿತ್ರಗಳೂ ಲಭ್ಯ. ಪಾಂಗಿತ ಪೂಜೆಮಾಡಿಸಲಾಗುತ್ತದೆ ಎಂದು ಸೈಟಿನಲ್ಲಿ ನಮೂದಿಸಿದ್ದಾರೆ.
ನಿಮಗೆ ಪದೇ ಪದೇ ಸೈಟಿಗೆ ಹೋಗಲು ಸಮಯವಿಲ್ಲದಿದ್ದರೆ, ಒಮ್ಮೆಗೇ ಚಂದಾ ಸಲ್ಲಿಸಿ, ಪರ್ಮನೆಂಟ್ ಭಕ್ತರಾಗಬಹುದು. ನಿಮ್ಮ ಆಯ್ಕೆಗಾಗಿ ಒಂದು ಪಟ್ಟಿಯೇ ಇದೆ,-ನಿಮ್ಮ ಹುಟ್ಟುಹಬ್ಬಕ್ಕೋ, ವೆಡ್ಡಿಂಗ್ ಆ್ಯನಿವರ್ಸರಿಗೋ, ನಿಮ್ಮ ಮಗು ಹುಟ್ಟುಹಬ್ಬಕ್ಕೋ, ಸಂಕಷ್ಟ ಚತುರ್ಥಿಗೋ ಅಥವಾ ಹಬ್ಬ ಹರಿದಿನಗಳಲ್ಲೋ ಪೂಜೆ ಮಾಡಿಸಬೇಕೆ, ಇಲ್ಲಿ ಟಿಕ್ ಮಾಡಿ ಎಂದು ಪಟ್ಟಿಯಲ್ಲಿ ನಮೂದಿಸಲಾಗಿದೆ. ಟಿಕ್ ಮಾಡಿ, ಕ್ಲಿಕ್ ಮಾಡಿದರಾಯಿತು. ನಿಮ್ಮ ಪ್ರಾರ್ಥನೆ ಹಾಗೂ ಪೂಜೆಯನ್ನು ಇಂಟರ್ನೆಟ್ನವರೇ ಸಲ್ಲಿಸುತ್ತಾರೆ. ಈ-ಮೇಯ್ಲ್ನ ಮೂಲಕ ಆಶೀರ್ವಾದ ಹಾಗೂ ಅಂಚೆ ಮೂಲಕ ಪ್ರಸಾದ ನಿಮಗೆ ತಲುಪುತ್ತದೆ. ಕಂಪ್ಯೂಟರ್ ತೆರೆಯ ಮೇಲೆ ನಿಮ್ಮ ಮನೆ ದೇವರಿಗೆ ನಮಸ್ಕರಿಸಿ ಕೃತಾರ್ಥರಾಗಬಹುದು.
ಈ ವರ್ಷದ ಏಪ್ರಿಲ್ 24ರಿಂದ ಇವತ್ತಿನವರೆಗೆ 10 ಸಾವಿರಕ್ಕೂ ಮಿಕ್ಕಿ ಭಕ್ತರು ಸೈಟಿನ ಸದಸ್ಯರಾಗಿದ್ದಾರೆ. ಸೌದೀ ಅರೇಬಿಯಾದ ಶ್ರೀಧರ ಶಾಸ್ತ್ರಿಗಳು ಈ ಸೇವೆಯನ್ನು ಪ್ರಶಂಸಿಸಿದ್ದಾರೆ. ಅನಿವಾಸಿ ಭಾರತೀಯರ ಮನಃಶಾಂತಿಗೆ ಇದೊಂದು ಒಳ್ಳೆ ಹೆಜ್ಜೆ ಎಂದು ಹೊಗಳಿದ್ದಾರೆ. ಪುರುಸೊತ್ತಿಲ್ಲದ ನೀವು ರಜೆ ಹಾಕಿ, ದೂರದ ಊರಿನ ದೇವರ ದರ್ಶನ ಮಾಡಿಬರುವ ವೆಚ್ಚಕ್ಕೆ ಹೋಲಿಸಿದರೆ ನೆಟ್ ಪೂಜೆಯ ಖರ್ಚು ಹೆಚ್ಚಲ್ಲ ಬಿಡಿ. ಕುಂತಲ್ಲೇ ಮನೆ ದೇವರ ಕಂಡು ಹೂ ಸಲ್ಲಿಸುವ ಭಾಗ್ಯ ಎಲ್ಲರಿಗೂ ಸಿಗದು. ಆ ಭಾಗ್ಯ ನಿಮ್ಮದಾಗಬೇಕಾದರೆ ಪೂಜಾರಾಧನೆಯ ಈ ಸೈಟಿಗೆ ಹೋಗಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications