ಶಾಂತಾ ನಾಗರಾಜ್ ಕಥೆ : ತಮಾಗುಚಿ (ಭಾಗ 2)

ರಾಮು ಮಲಗಿದಲ್ಲಿಂದಲೇ ಸರಿದ ಕರ್ಟನ್ ಸಂದಿಯಿಂದ ಸೊಸೆಯ ಮೊಣಕಾಲವರೆಗಿನ ಪ್ಯಾಂಟ್ ಕೆಳಗಿನ ಕಾಲುಗಳೂ, ಮಗನ ಟವೆಲ್ ಕೆಳಗಿನ ಕಾಲುಗಳೂ, ಮಧ್ಯೆ ಮಧ್ಯೆ ಎಳೆಯ ಕಾಲುಗಳೂ ಹಾಲಿನತುಂಬಾ ಸರಿದಾಡುತ್ತಿರುವುದನ್ನು ನೋಡುತ್ತಿರುತ್ತಾರೆ. ಅವರಿಗಾಗ ನಿದ್ದೆ ಹರಿದಿದ್ದರೂ ಏಳಲು ಹೋಗುವುದಿಲ್ಲ. ಏಕೆಂದರೆ ಇರುವ ಎರಡು ಬಾತ್ರೂಮುಗಳಲ್ಲಿ ಒಳಗಿದ್ದವರನ್ನು"ಬೇಗ ಬಾ ನಮಗೂ ಹೊತ್ತಾಗುತ್ತಿದೆ" ಎಂದು ಹೊರಗಿದ್ದವರು ಅವಸರಿಸುತ್ತಿರುತ್ತಾರೆ. ಎಂಟೂವರೆಯವರೆಗೆ ಈ ಮನೆಯ ಜನ, ಬೆಂಗಳೂರಿನ ಸಿಟಿಮಾರ್ಕೆಟ್ಟಿನ ಸುತ್ತಾ ಕುಣಿಯುವ ಕರಗದಂತೆಯೇ ಮನೆಯ ಒಳಗೆಲ್ಲಾ ಹೆಜ್ಜೆಹಾಕುತ್ತಿರುತ್ತಾರೆ. ಎಂಟೂವರೆಗೆ ಇಡೀ ಮನೆ ಬಕ್ಕನೆ ಬೋರಲು ಬಿದ್ದಂತೆ ಖಾಲಿಯಾಗಿಬಿಡುತ್ತದೆ. ಮತ್ತೆ ಈ ಮನೆಗೆ ಜೀವ ಬರುವುದು ನಾಲ್ಕೂವರೆಗೆ ಅಮ್ಮ ಮತ್ತು ಮಕ್ಕಳ ಪ್ರವೇಶವಾದಾಗಲೇ!
ಸುಧಾ ಹತ್ತಿರದ ಶಾಲೆಯಲ್ಲಿ ಇಂಗ್ಲಿಷ್ ಕಲಿಸಲು ಹೋಗುತ್ತಾಳೆ. ಅವಳ ಕೆಲಸ ಮುಗಿಯುವುದು ಎರಡು ಗಂಟೆಗೇ ಆದರೂ ಎರಡುವರೆಗೆ ಮನೆಗೆ ಬಂದು ಬೆಳಿಗ್ಗೆ ಏನು ಮಾಡಿರುತ್ತಾಳೋ ಅದನ್ನು "ಊಟ" ಎನ್ನುವ ಹೆಸರಲ್ಲಿ ತಿಂದು ಅದೇ ಕಟ್ಟಡದ ಮೊದಲ ಮಹಡಿಯಲ್ಲಿರುವ ಗೆಳತಿಯ ಮನೆಗೆ ಹೋದರೆ ಅವಳು ಮತ್ತೆ ಈ ಮನೆಯೊಳಗೆ ಕಾಲಿಡುವುದು ಶಾಲೆ ಮುಗಿಸಿ ಬರುವ ಮಕ್ಕಳೊಂದಿಗೇ! ಮತ್ತೆ ಬೇರೊಂದು ಕುಣಿತದ ತಯ್ಯಾರಿ! ಮಕ್ಕಳನ್ನು ಸ್ವಿಮ್ಮಿಂಗ್ಗೆ ಕರೆದೊಯ್ಯಬೇಕು, ವಾಪಸ್ ಬಂದಮೇಲೆ ಹೋಮ್ವರ್ಕ್ ಮಾಡಿಸಬೇಕು ರಾತ್ರಿ ಎಂಟಕ್ಕೆ ಗಂಡಯ್ಯ ಬರುವ ವೇಳೆಗೆ ಊಟದ ತಯ್ಯಾರಿಯಾಗಬೇಕು!
ಅನ್ನ, ಅಥವಾ ಅಂಗಡಿಯಿಂದ ತಂದ ಚಪಾತಿ ಇಲ್ಲವೇ ಪರೋಟ, ನಿನ್ನೆಯ ಹುಳಿ, ಮೊನ್ನೆಯ ಸಾರು, ನಾಲ್ಕು ದಿನದ ಹಿಂದಿನ ಪಲ್ಯ, ಯಾವತ್ತೋ ಮಾಡಿದ ಸ್ವಲ್ಪ ಚಿತ್ರಾನ್ನ, ಎಲ್ಲವೂ ಗ್ಯಾಸ್ ಒಲೆಯ ಮೇಲೆ, ಮೈಕ್ರೋ ಓವನ್ನಿನಲ್ಲಿ ಮತ್ತೆ ಕೊತಕೊತನೆ ಕುದಿಯುತ್ತವೆ. ಗಂಡಹೆಂಡತಿಗೆ ಅದೇ ಪರಮಾನ್ನ! ಇಡೀ ದಿನ ಬ್ರೆಡ್ ಉಪ್ಪಿಟ್ಟನ್ನೋ ಪಾಸ್ತಾವನ್ನೋ ತಿಂದನಾಲಿಗೆಗೆ ಇವೆಲ್ಲಾ ಅಮೃತಸಮಾನ. ಮಕ್ಕಳು ಗೊಣಗುತ್ತವೆ "ಥೂ ಇದು ನಿನ್ನೇನೇ ಚೆನ್ನಾಗಿರಲಿಲ್ಲ ಇವತ್ತೂ ಇದೇ ತಿನ್ಬೇಕಾ"? "ಸುಮ್ನೇ ತಿನ್ರೋ ಪಾಪ ಹೊತ್ಹೊತ್ತಿಗೆ ರುಚಿರುಚಿಯಾಗ್ ಮಾಡ್ಹಾಕ್ತೀನಿ ನೋಡಿ ಕೊಬ್ಬು ನಿಮಗೆ. ನನ್ನ ಹಾಗೆ ಹಾಸ್ಟೆಲ್ ಊಟ ತಿನ್ಕೊಂಡು ಬಿದ್ದಿರಬೇಕಾಗಿತ್ತು ಆಗ ಗೊತ್ತಾಗ್ತಿತ್ತು" ಎಂದು ತನ್ನ ಅಡುಗೆಗೆ ಸರ್ಟಿಫಿಕೇಟನ್ನೂ, ಮಕ್ಕಳಿಗೆ ಬೆದರಿಕೆಯನ್ನೂ ಒಟ್ಟಿಗೇ ಕೊಡುತ್ತಾಳೆ. (ಕಥೆ ಮುಂದುವರಿದಿದೆ...)
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications