ಕೆಎಸ್ ನ ನೆನಪಿನಲ್ಲೊಂದು ಗೀತ ಸಾಹಿತ್ಯ
ರಚನೆ
:ಕೆ
ಎಸ್
ನರಸಿಂಹಸ್ವಾಮಿ
ಕವನ
ಸಂಕಲನ:
ಸಂಜೆ
ಹಾಡು.
ಎಲ್ಲಿ
ಕತ್ತಲೆಯಿತ್ತೊ
ಅಲ್ಲಿ
ತನ್ನಿರಿ
ಬೆಳಕ
ಹಸಿದ
ಹೊಟ್ಟೆಯ
ಮೇಲೆ
ಬೆಳ್ದಿಂಗಳನು
ಚೆಲ್ಲಿ
ಮುಂಬರಿವ
ನಮಗೆ
ಶುಭವನ್ನು
ತರಲಿ;
ಮಲಗಿದರೆ
ಕನಸು,
ಎದ್ದರೆ
ಪಯಣ
:
ಹೀಗಿದೆ
ಬದುಕು
ಹಾದಿಯುದ್ದಕು
ಹೂವ
ಚಲ್ಲುತಿರಲಿ.
ತುಟಿ
ಒಣದವರ
ಹಾಡನ್ನು
ಕೇಳುವಿರೇನು
?
ಆದರೂ
ಹಾಡು
ಬರುವುದು
ಸಂಜೆಯೊಳಗಾಗಿ
ಕನಸಿನ
ಪರಂಪರೆಯ
ನೆಯ್ದು
;
ಹಾದಿಬೀದಿಗಳಲ್ಲಿ
ಬತ್ತಲೆ
ಮಗು
ಅತ್ತು
ಸಂಜೆಯಾಯಿತು
ಎಂಬ
ಚಿಂತನೆಯಲಿ.
ಕೆರೆ
ಬತ್ತಿದಾಗ
ಕಣ್ಣಲ್ಲಿ
ನೀರು
ಬರುವುದು
ರೊಕ್ಕವನು
ಕೊಟ್ಟು
ಕೊಳ್ಳುವ
ಸರಕೆ
ಸಂತೋಷ
?
ಸಂಗೀತಕ್ಕೆ
ಬೇಕು
ಶ್ರುತಿ,
ಲಯ,
ಆಲಾಪನೆ
ಹಸಿವ
ಹಾಡುವುದೆಂತು,
ತಾಳವೆಲ್ಲಿವೆ
ಅದಕೆ
?
ಬೀದಿ
ದೀಪದ
ಕೆಳಗೆ
ಸತ್ತ
ನಾಯಿಯ
ಸುತ್ತ
ಹತ್ತಾರು
ಮಕ್ಕಳು
ಮರಿ
;
ಬೀದಿನಲ್ಲಿಯ
ತುಟಿಗೆ
ಭೃಂಗ
ಮುತ್ತಿಕ್ಕುವುದು.
ಕುಡಿವ
ನೀರಿಗೆ
ಸಹಿತ
ಕಷ್ಟವಾಗಿರುವಾಗ
ಯಾವ
ರಾಗದಿ
ಹಾಡಿದರೆ
ಕೊಡ
ತುಂಬುವುದು
?
ಬಾಯಿ
ತುಂಬುವ
ತನಕ
ಹಾಡು
ತುಂಬುವುದಿಲ್ಲ.
ದೇಗುಲ
ಬಾಗಿಲಲಿ
ಮಂತ್ರಾಕ್ಷತೆಯ
ಚೆಲ್ಲಿ
ಹೊರಟು
ಹೋಗಿದ್ದಾರೆ
ನಂಬುವ
ಜನ;
ಧಾತು
-
ಈಶ್ವರಗಳಲಿ
ಕ್ಷಾಮ
ಬಂದಿತ್ತೆಂದು
ಅಜ್ಜಯ್ಯ
ಹಾಡುವನು
ಮರಿಮಗನಿಗೆ.
ಈಗ
ಎಲ್ಲೆಲ್ಲು
ಹಾಹಾಕಾರವೆದ್ದಿಹುದು,
ಈ
ಅಶಾಂತಿಯೇ
ನಿಮಗೆ
ಎಲ್ಲ
ಹಾಡು.
ಯಾವ
ಹಾಡನು
ನೀವು
ಕೇಳಬಯಸುತ್ತೀರಿ,
ಹಾಡು
ಕೇಳುವುದಷ್ಟೆ
ಸಂತೋಷವೆ
?
ಹಾಡು,
ಗೋಡೆಗೆ
ಒರಗು,
ಕಣ್ಣು
ಮುಚ್ಚಿಕೊ
ಆಗ
ಬರುವುದು
ಬುದ್ದಿ!
ಕೆಲವರಿಗೆ
ಹಾಡು
ಬೇಕಂತೆ,
ಕೇಳದ
ಒಡನೆ
ನಿದ್ದೆ
ಬರಬೇಕಂತೆ!
ಅದು
ಎಲ್ಲಿ
ಸಿಕ್ಕುವುದು
?
ಬಾಂದಳದ
ತನಕ
ಕ್ಯೂ
ಬೆಳೆದಿರುವುದು,
ತಂತಿಗಳ
ಕಿತ್ತ
ತಂಬೂರಿಯಾಯಿತು
ಹಾಡು!
ನೊಂದ
ಜೀವಕ್ಕೆ
ಬೇಕಾದ್ದು
ಸಿರಿಹಾಡು.
ಇಂಪಾದ
ಹಾಡು
ಚೆಲುವು
ಸೂಸುವ
ಹಾಡು,
ಭಾವಪೂರ್ಣ
ಹಾಡು;
ದುರ್ಭಿಕ್ಷದಲಿ
ನಾವದನು
ಪಡೆಯುವುದು
ಹೇಗೆ
?
ಯಾರೊ
ಅತ್ತಂತಾಯ್ತು
ಹಾಡು
ಮುಗಿದು.